23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ನಿಮ್ಮ ಮನೋಭಾವ ಒಳ್ಳೆಯದಾಗಿದ್ದರೆ ಕೌಶಲ್ಯಗಳ ಸದುಪಯೋಗ ಮಾಡಲು ಆಗುತ್ತದೆ: ಡಾ. ಸತೀಶ್ಚಂದ್ರ ಎಸ್.

ಬೆಳ್ತಂಗಡಿ: ದ್ಯೆಯ ಉದ್ದೇಶ ಕೇವಲ ಜ್ಞಾನ ಸಂಪಾದನೆ ಮಾತ್ರವಲ್ಲ ನಮ್ಮ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಧನಾತ್ಮಕ ಧೋರಣೆಯು ಅಗತ್ಯ. ಜೀವನದಲ್ಲಿ ಶಾಂತಿ ನೆಮ್ಮದಿ ಯಶಸ್ಸು ಬೇಕಾದರೆ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಆಗ ನೀವು ಸಮಾಜಕ್ಕೆ ಒಳ್ಳೆಯ ಆಸ್ತಿ ಆಗಬಲ್ಲಿರಿ. ನಿಮ್ಮ ಮನೋಭಾವ ಒಳ್ಳೆದಾಗಿದ್ದರೆ ನಿಮ್ಮ ಕೌಶಲ್ಯಗಳ ಸದುಪಯೋಗ ಮಾಡಲು ಆಗುತ್ತಿದೆ ಎಂದು ಡಾ. ಸತೀಶ್ಚಂದ್ರ ಎಸ್. ಅವರು ಶ್ರೀ ಧ.ಮಂ ಮಹಿಳಾ ಐಟಿಐ ಉಜಿರೆ ಇಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲ ಮಾತೃಶ್ರೀ ಡಾ.ಹೇಮಾವತಿ ವಿ ಹೆಗ್ಗಡೆಯವರ ಆಶಯದಂತೆ ಮಹಿಳಾ ಸಬಲೀಕರಣ ಇದಕ್ಕೆ ಪೂರಕವಾದ ವಾತಾವರಣ ಇಲ್ಲಿ ನಿರ್ಮಾಣವಾಗಿರುವುದು ಸಂತೋಷದ ವಿಷಯ ಜೊತೆಗೆ ಸ್ವಚ್ಚ, ಸುಂದರ, ಸುಸಂಸ್ಕೃತ ಹಾಗೂ ಶಿಸ್ತು ಬದ್ದವಾದ ವಾತಾವರಣ ಇಲ್ಲಿ ನಿರ್ಮಾಣವಾಗಿರುವುದು ಸಂತೋಷ ಪಡುತ್ತೇವೆ ಎಂದು ಈ ಸಂದರ್ಭದಲ್ಲಿ ಹೇಳಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರಿನ Sowkar Textile and Uniform ಇದರ ವ್ಯವಸ್ಥಾಪಕ ಪಾಲುದಾರರಾದ ಶ್ರೀ ಪ್ರಕಾಶ್ ಭಂಡಾರಿ ಕುತ್ತೆತ್ತೂರು ಇವರು ವಿದ್ಯೆಗೆ ವಿನಯವೇ ಭೂಷಣ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆಯು ವಿದ್ಯಾರ್ಥಿಗಳ ಜೊತೆ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳುವುದು ಉತ್ತಮ. ಪೂಜ್ಯರ ದೂರದೃಷ್ಟಿತ್ವ ಹಾಗೂ ಹಸಿದವನಿಗೆ ಒಂದು ಹೊತ್ತು ಊಟ ಕೊಡುವ ಬದಲು ಒಂದು ಹೊತ್ತಿನ ಊಟ ಉತ್ಪಾದಿಸುವ ವಿಧಾನ ಹೇಳಿಕೊಡುವುದು ಪೂಜ್ಯರ ವಿಶೇಷ ಗುಣ. ಇಟ್ಟ ಹೆಜ್ಜೆ ಹಿಂದೆ ಇಡಬೇಡಿ ದೈರ್ಯದಿಂದ ಮುನ್ನಡೆಯಿರಿ ಶುಭವಾಗಲಿ ಎಂದು ಹೇಳಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವೇಣೂರು ಐಟಿಐ ಪ್ರಾಚಾರ್ಯರಾದ ಶ್ರೀ ವಿಶ್ವೇಶ್ವರ ಪ್ರಸಾದ್ ಇವರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿನಿಯರ ಹೆತ್ತವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಸಂಸ್ಥೆಯ ವಾರ್ಷಿಕ ವರದಿಯನ್ನು ಪ್ರಾಂಶುಪಾಲರು ಮಂಡಿಸಿದರು. ಕು ಸಮೀಕ್ಷಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಪ್ರಜ್ಞಾ ಸ್ವಾಗತ ಮಾಡಿದ ಈ ಕಾರ್ಯಕ್ರಮದಲ್ಲಿ ರ್ಮೇಘನಾ ಧನ್ಯವಾದಗಳನ್ನು ಅರ್ಪಿಸಿದರು

Related posts

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠೆ, ವೀರಕೇಸರಿ ಹಿಂದೂಪುರ ಸಂಘಟನೆಯಿಂದ ಬಳಂಜ ಪೇಟೆಯಲ್ಲಿ ಶ್ರೀರಾಮದೇವರ ಶೃಂಗಾರ ಮಂಟಪ

Suddi Udaya

ಮೊಗ್ರು: ಮಳೆಯಿಂದ ಹಾನಿಯಾದ ಮುಖ್ಯರಸ್ತೆಯ ದುರಸ್ತಿ ಕಾರ್ಯ

Suddi Udaya

ಓಡಿಲ್ನಾಳ: ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

Suddi Udaya

ಉಜಿರೆ: ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇ.ಸಿ. ವಿಭಾಗದಿಂದ ಸರ್ಕ್ಯೂಟ್ ಎಕ್ಸ್ ಪೋ 2024

Suddi Udaya

ನಡ: ಸ್ಟಾರ್ ಲೈನ್ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಮಂಗಳೂರಿನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣ ಖಂಡನೀಯ : ರಕ್ಷಿತ್ ಶಿವರಾಂ

Suddi Udaya
error: Content is protected !!