March 7, 2026
ಅಪರಾಧ ಸುದ್ದಿ

ಕಡಿರುದ್ಯಾವರ ಎಮಾ೯ಲ್ ಪಲ್ಕೆಯಲ್ಲಿ ಆಕಸ್ಮಿಕ ವಾಗಿ ಕೈಜಾರಿ ಬಾವಿಗೆ ಬಿದ್ದು ಮೃತಪಟ್ಟ ಬೆಳಗಾವಿ ನಿವಾಸಿ ಪ್ರವೀಣ್ ಎಂಬವರ ವಾರಿಸುದಾರರ ಪತ್ತೆಗೆ ಪೊಲೀಸರ ಮನವಿ

ಕಡಿರುದ್ಯಾವರ: ಇಲ್ಲಿಯ ಎಮಾ೯ಲ್ ಪಲ್ಕೆಯಲ್ಲಿ ಬಾವಿಗೆ ಬಿದ್ದ ಕೊಡಪಾನ ತೆಗೆಯುತ್ತಿದ್ದ ವೇಳೆ ಆಕಸ್ಮಿಕ ವಾಗಿ ಕೈಜಾರಿ ಬಾವಿಗೆ ಬಿದ್ದ ಬೆಳಗಾವಿ ನಿವಾಸಿ ಎನ್ನಲಾದ ಪ್ರವೀಣ್ ( 35 ವರ್ಷ) ಎಂಬವರ
ವಾರಿಸುದಾರರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರವೀಣ್ ಸುಮಾರು 2 ವರ್ಷಗಳಿಂದ ಸುಮಿತ್ರಾ ಎಂಬವರ ಮನೆಯಲ್ಲಿ ವಾಸವಾಗಿದ್ದು , ಮಾ. 15 ರಂದು ಕೆಲಸಕ್ಕೆ ರಜೆ ಇದ್ದ ಕಾರಣ ಪ್ರವೀಣ್ ರವರು ದೇವರಾಜುರನ್ನು ಕರೆದು ಮನೆಯ ಬಳಿ ಇರುವ ಸರಕಾರಿ ಬಾವಿಗೆ ಮನೆಯ ಕೊಡಪಾನ ಬಿದ್ದಿದೆ. ತೆಗೆಯಲು ಬಾ ಎಂದು ಕರೆದಿದ್ದು, ದೇವರಾಜ್ ಹಾಗೂ ಪ್ರವೀಣ್ ರವರು ಜೊತೆಯಾಗಿ ಬಾವಿಯ ಬಳಿ ಹೋಗಿ ಪ್ರವೀಣ್ ರವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಕೊಡಪಾನವನ್ನು ಮೇಲಕ್ಕೆ ತರುವ ಸಮಯ ಒಮ್ಮಲೆ ಕೈ ಜಾರಿ ಆಕಸ್ಮಿಕವಾಗಿ ಬಾವಿಯ ನೀರಿಗೆ ಬಿದ್ದರೆನ್ನಲಾಗಿದೆ. ಕೂಡಲೇ
ನೆರೆಕರೆಯವರ ಸಹಾಯದಿಂದ ಅಗ್ನಿ ಶಾಮಕ ದಳದವರನ್ನು ಕರೆಸಿ ಅವರನ್ನು ಮೇಲಕ್ಕೆತ್ತಿಸಿ ನೋಡಿದಾಗ ಪ್ರವೀಣ್ ರವರು ಮೃತಪಟ್ಟಿದ್ದರು. ಬೆಳ್ತಂಗಡಿ ಪೊಲೀಸ್ ಠಾಣಾ ಯುಡಿಆರ್ ನಂ: 11/2023 ಕಲಂ: 174 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಾಗಿದೆ.
ಮಂಗಳೂರು ಆಸ್ಪತ್ರೆಗೆ ಮೃತ ದೇಹ :
ಮೃತ ದೇಹದ ವಾರಿಸುದಾರರ ಪತ್ತೆಗಾಗಿ ಮೃತ ದೇಹವನ್ನು ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಯ (ಶಿಥಿಲೀಕರಣ) ಶವಾಗಾರದಲ್ಲಿರಿಸಲಾಗಿದೆ.
ಪತ್ತೆಗೆ ಮನವಿ :
ಸದರಿ ಮೃತ ಬೆಳಗಾವಿ ನಿವಾಸಿ ಎನ್ನಲಾದ ಪ್ರವೀಣ್ ಪ್ರಾಯ ಸುಮಾರು 35 ವರ್ಷ ಎಂಬವರ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಪೊಲೀಸು ನಿರೀಕ್ಷಕರು ಬೆಳ್ತಂಗಡಿ ಮೊಬೈಲ್: 9480805370, ಬೆಳ್ತಂಗಡಿ ಪೊಲೀಸ್ ಠಾಣೆ ದೂ: 08256-232093 ಅಥವಾ ದ.ಕ ಜಿಲ್ಲಾ ಕಂಟ್ರೋಲ್ ರೂಂ: 9480805300 ಕ್ಕೆ ಕರೆ ಮಾಡಿ ತಿಳಿಸಬೇಕಾಗಿ ಕೋರಲಾಗಿದೆ.
ಮೃತ ವ್ಯಕ್ತಿಯ ಚಹರೆ:
ಸಾದಾ ಸಪೂರ ಶರೀರ, ಗೋಧಿ ಮೈಬಣ್ಣ, ಎಡ ಕೈ ಗಂಟಿನ ಒಳ ತಟ್ಟಿನಲ್ಲಿ ಕಪ್ಪು ಮಚ್ಚೆ, ಸುಮಾರು 8 ಇಂಚು ಉದ್ದದ ತಲೆ ಕೂದಲು, ತೆಳು ಮೀಸೆ ಹಾಗೂ ಗಡ್ಡ ಬಿಟ್ಟಿರುತ್ತಾರೆ ಎಂದು ಪೊಲೀಸರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ಭಗವಾನ್ ಶ್ರೀ ಕೃಷ್ಣನಿಗೆ ಅಪಹಾಸ್ಯ ಮಾಡಿದವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Suddi Udaya

ಅನನ್ಯ ಭಟ್ ನಾಪತ್ತೆ ಪ್ರಕರಣ; ಸುಜಾತ ಭಟ್ ಗೆ ಬಿಗ್ ರಿಲೀಫ್

Suddi Udaya

ಧರ್ಮಸ್ಥಳ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ ಸೇರಿ ನಾಲ್ವರ ವಿರುದ್ದ ಎಫ್.ಐ.ಆರ್ ಗೆ ಹೈಕೋರ್ಟ್ ಮಧ್ಯಂತರ ತಡೆ

Suddi Udaya

ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರೂ.45 ಸಾವಿರ ಮೌಲ್ಯದ ಎಂಡಿಎಂಎ ಪತ್ತೆ – ಮೂವರ‌ ಬಂಧನ

Suddi Udaya

ಮೂರು ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟದ ಪ್ರಕರಣ ಪತ್ತೆ: ಪಿಕಪ್ ಸಹಿತ ವಾಹನದಲ್ಲಿದ್ದ 6 ದನ, 2 ಗಂಡು ಕರುಗಳು ಸೇರಿ ಒಟ್ಟು 8 ಜಾನುವಾರು ವಶ

Suddi Udaya

ತೆಕ್ಕಾರು : ಪತ್ನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ಪತಿ

Suddi Udaya
error: Content is protected !!