September 6, 2026
ಅಪರಾಧ ಸುದ್ದಿ

ಕಡಿರುದ್ಯಾವರ ಎಮಾ೯ಲ್ ಪಲ್ಕೆಯಲ್ಲಿ ಆಕಸ್ಮಿಕ ವಾಗಿ ಕೈಜಾರಿ ಬಾವಿಗೆ ಬಿದ್ದು ಮೃತಪಟ್ಟ ಬೆಳಗಾವಿ ನಿವಾಸಿ ಪ್ರವೀಣ್ ಎಂಬವರ ವಾರಿಸುದಾರರ ಪತ್ತೆಗೆ ಪೊಲೀಸರ ಮನವಿ

ಕಡಿರುದ್ಯಾವರ: ಇಲ್ಲಿಯ ಎಮಾ೯ಲ್ ಪಲ್ಕೆಯಲ್ಲಿ ಬಾವಿಗೆ ಬಿದ್ದ ಕೊಡಪಾನ ತೆಗೆಯುತ್ತಿದ್ದ ವೇಳೆ ಆಕಸ್ಮಿಕ ವಾಗಿ ಕೈಜಾರಿ ಬಾವಿಗೆ ಬಿದ್ದ ಬೆಳಗಾವಿ ನಿವಾಸಿ ಎನ್ನಲಾದ ಪ್ರವೀಣ್ ( 35 ವರ್ಷ) ಎಂಬವರ
ವಾರಿಸುದಾರರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರವೀಣ್ ಸುಮಾರು 2 ವರ್ಷಗಳಿಂದ ಸುಮಿತ್ರಾ ಎಂಬವರ ಮನೆಯಲ್ಲಿ ವಾಸವಾಗಿದ್ದು , ಮಾ. 15 ರಂದು ಕೆಲಸಕ್ಕೆ ರಜೆ ಇದ್ದ ಕಾರಣ ಪ್ರವೀಣ್ ರವರು ದೇವರಾಜುರನ್ನು ಕರೆದು ಮನೆಯ ಬಳಿ ಇರುವ ಸರಕಾರಿ ಬಾವಿಗೆ ಮನೆಯ ಕೊಡಪಾನ ಬಿದ್ದಿದೆ. ತೆಗೆಯಲು ಬಾ ಎಂದು ಕರೆದಿದ್ದು, ದೇವರಾಜ್ ಹಾಗೂ ಪ್ರವೀಣ್ ರವರು ಜೊತೆಯಾಗಿ ಬಾವಿಯ ಬಳಿ ಹೋಗಿ ಪ್ರವೀಣ್ ರವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಕೊಡಪಾನವನ್ನು ಮೇಲಕ್ಕೆ ತರುವ ಸಮಯ ಒಮ್ಮಲೆ ಕೈ ಜಾರಿ ಆಕಸ್ಮಿಕವಾಗಿ ಬಾವಿಯ ನೀರಿಗೆ ಬಿದ್ದರೆನ್ನಲಾಗಿದೆ. ಕೂಡಲೇ
ನೆರೆಕರೆಯವರ ಸಹಾಯದಿಂದ ಅಗ್ನಿ ಶಾಮಕ ದಳದವರನ್ನು ಕರೆಸಿ ಅವರನ್ನು ಮೇಲಕ್ಕೆತ್ತಿಸಿ ನೋಡಿದಾಗ ಪ್ರವೀಣ್ ರವರು ಮೃತಪಟ್ಟಿದ್ದರು. ಬೆಳ್ತಂಗಡಿ ಪೊಲೀಸ್ ಠಾಣಾ ಯುಡಿಆರ್ ನಂ: 11/2023 ಕಲಂ: 174 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಾಗಿದೆ.
ಮಂಗಳೂರು ಆಸ್ಪತ್ರೆಗೆ ಮೃತ ದೇಹ :
ಮೃತ ದೇಹದ ವಾರಿಸುದಾರರ ಪತ್ತೆಗಾಗಿ ಮೃತ ದೇಹವನ್ನು ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಯ (ಶಿಥಿಲೀಕರಣ) ಶವಾಗಾರದಲ್ಲಿರಿಸಲಾಗಿದೆ.
ಪತ್ತೆಗೆ ಮನವಿ :
ಸದರಿ ಮೃತ ಬೆಳಗಾವಿ ನಿವಾಸಿ ಎನ್ನಲಾದ ಪ್ರವೀಣ್ ಪ್ರಾಯ ಸುಮಾರು 35 ವರ್ಷ ಎಂಬವರ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಪೊಲೀಸು ನಿರೀಕ್ಷಕರು ಬೆಳ್ತಂಗಡಿ ಮೊಬೈಲ್: 9480805370, ಬೆಳ್ತಂಗಡಿ ಪೊಲೀಸ್ ಠಾಣೆ ದೂ: 08256-232093 ಅಥವಾ ದ.ಕ ಜಿಲ್ಲಾ ಕಂಟ್ರೋಲ್ ರೂಂ: 9480805300 ಕ್ಕೆ ಕರೆ ಮಾಡಿ ತಿಳಿಸಬೇಕಾಗಿ ಕೋರಲಾಗಿದೆ.
ಮೃತ ವ್ಯಕ್ತಿಯ ಚಹರೆ:
ಸಾದಾ ಸಪೂರ ಶರೀರ, ಗೋಧಿ ಮೈಬಣ್ಣ, ಎಡ ಕೈ ಗಂಟಿನ ಒಳ ತಟ್ಟಿನಲ್ಲಿ ಕಪ್ಪು ಮಚ್ಚೆ, ಸುಮಾರು 8 ಇಂಚು ಉದ್ದದ ತಲೆ ಕೂದಲು, ತೆಳು ಮೀಸೆ ಹಾಗೂ ಗಡ್ಡ ಬಿಟ್ಟಿರುತ್ತಾರೆ ಎಂದು ಪೊಲೀಸರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ಮಹಿಳೆಯ ಕುತ್ತಿಗೆಯಿಂದ ಸರ ಎಳೆದು ಪರಾರಿ ಪ್ರಕರಣ: 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಕರಾಯ ಕಲ್ಲೇರಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಟ : ಉಪ್ಪಿನಂಗಡಿ ಪೊಲೀಸರ ದಾಳಿ‌ ನಗದು ಸಹಿತ ಐವರು ವಶಕ್ಕೆ

Suddi Udaya

ಜಿಪ್ಸಿ ಮತ್ತು ಬೈಕ್ ನಡುವೆ ಅಪಘಾತ: ಬೈಕ್ ಸವಾರ ಬಳಂಜ ಶಾಲಾ ಮುಖ್ಯೋಪಾಧ್ಯಾಯರಿಗೆ ಗಂಭೀರ ಗಾಯ

Suddi Udaya

ಕಡಿರುದ್ಯಾವರ: ಅಕ್ರಮ ಮರಳು ಸಂಗ್ರಹ ಪತ್ತೆ: ಪ್ರಕರಣ ದಾಖಲು

Suddi Udaya

ಮಾಚಾರು: ಕೊಲೆಯತ್ನ ಪ್ರಕರಣ ಆರೋಪಿಗಳಿಗೆ ಹೈಕೋರ್ಟ್ ಜಾಮೀನು

Suddi Udaya

ನೇಣುಬಿಗಿದು ಯುವಕ ಆತ್ಮಹತ್ಯೆಗೆ ಶರಣು: ವಿಷಯ ತಿಳಿದು ತಂದೆ ಕೂಡ ಆತ್ಮಹತ್ಯೆ ಪ್ರಯತ್ನ

Suddi Udaya
error: Content is protected !!