ಮಚ್ಚಿನ ಉಚಿತ ನೇತ್ರಾ ತಪಾಸಣಾ ಶಿಬಿರ

Suddi Udaya

ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಜರ್ ಲಿಮಿಟೆಡ್ ಪಣಂಬೂರು ಮಂಗಳೂರು ಇವರು ಜಸ್ಟಿಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು,ಗ್ರಾಮ ಪಂಚಾಯತ್ ಮಚ್ಚಿನ,ವೀರಕೇಸರಿ ಫ್ರೆಂಡ್ಸ್ ( ರಿ) ಬಳ್ಳಮಂಜ ಇದರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ಮಾ.26 ರಂದು ಸಮುದಾಯ ಭವನ ಬಳ್ಳಮಂಜದಲ್ಲಿ ನಡೆಯಿತು. ಸುಮಾರು 150 ಕ್ಕು ಹೆಚ್ಚು ಫಲಾನುಭವಿಗಳು ಇದರ ಸದುಪಯೋಗ ಪiಡೆದುಕೊಂಡರು.


ಬಳ್ಳಮಂಜ ಅನುವಂಶಿಕ ಆಡಳಿತ ಮೊಕ್ತೇಸರಾದ ಡಾ| ಎಂ ಹರ್ಷ ಸಂಪಿಗೆತ್ತಾಯ ಉದ್ಘಾಟಿಸಿ ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಚ್ಚಿನ ಗ್ರಾ. ಪಂ. ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಮಚ್ಚಿನ ನೀಲೇಶ್ ಕುಮಾರ್ ಗೌರವ ಸಲಹೆಗಾರರು ವೀರಕೇಸರಿ ಫ್ರೆಂಡ್ಸ್ ಬಳ್ಳಮಂಜ, ಸುಧೀರ್ ಜೆ. ಶೆಟ್ಟಿ ಗೌರವ ಅಧ್ಯಕ್ಷರು ಶ್ರೀ ಅನಂತೇಶ್ವರ ಸ್ವಾಮಿ ಕಂಬಳ ಸಮಿತಿ ಬಳ್ಳಮಂಜ , ಅಶೋಕ್ ನಾವಡ ಅಧ್ಯಕ್ಷರು ವೀರಕೇಸರಿ ಫ್ರೆಂಡ್ಸ್ ಬಳ್ಳ ಮಂಜ, ಎಸ್. ಗಿರೀಶ್ ಮುಖ್ಯ ಉತ್ಪಾದನಾಧಿಕಾರಿ ಎಂ ಸಿ ಎಫ್ ಮಂಗಳೂರು, ರಿಷಿಕೇಶ್ ಅಮೀನ್ ಮುಖ್ಯಸ್ಥರು ಜಸ್ಟಿಸ್ ಕೆಎಸ್ ಹೆಗ್ಡೆ ಆಸ್ಪತ್ರೆ ದೇರಲ್ಕಟ್ಟೆ ಮಂಗಳೂರು ಇವರುಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ದೀಕ್ಷಿತ್ ಶೆಟ್ಟಿ ಮತ್ತು ಪ್ರಾರ್ಥನೆಯನ್ನು ಪುಷ್ಪ ರಾವ್ ಅವರು ಹಾಗೂ ನಿಶಾಂತ್ ಕೆ. ಧನ್ಯವಾದ ನೀಡಿದರು.

Leave a Comment

error: Content is protected !!