July 23, 2026
ಗ್ರಾಮಾಂತರ ಸುದ್ದಿ

ಮದ್ದಡ್ಕ ಮಠದಲ್ಲಿ ಶ್ರೀ ರಾಮೋತ್ಸವ ಆಚರಣೆ:ಆಯೋಧ್ಯೆ ಶ್ರೀರಾಮ ಮಂದಿರ ಹೊಕ್ಕರೆ ದೇಶದ ಸಂಸ್ಕೃತಿಗಳ ಅನಾವರಣ: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಬೆಳ್ತಂಗಡಿ, : ಶತಶತಮಾನಗಳ ಕನಸು ನನಸಾಗುತ್ತಿದೆ. ಇವತ್ತು ರಾಮ ಮಂದಿರದ ‘ಗುಡಿಯ ಕಂಬಗಳು ನಿಂತು, ಗೋಡೆ‌ ಗಳೆಲ್ಲವೂ ಆಗಿವೆ. ತೊಲೆಗಳನ್ನು ಜೋಡಿಸಿ ಶಿಲಾಫಲಕವನ್ನಿಟ್ಟರೆ ಮೊದಲನೇ ‘ಹಂತದ ಕೆಲಸ ಸಮಾಪ್ತವಾಗುತ್ತದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳವರು ನುಡಿದರು.
‌ ಬೆಳ್ತಂಗಡಿ ಮದ್ದಡ್ಕ ಮಠದಲ್ಲಿ ಶ್ರೀ ರಾಮೋತ್ಸವ ಆಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ರಾಮಚಂದ್ರನ ಪ್ರತಿಮೆ ನಿರ್ಮಿಸಲು ಆಯ್ದ ಶಿಲೆಗಳನ್ನು ತಂದದ್ದಾಗಿದೆ, ಇವುಗಳಲ್ಲಿ ಶಿಲ್ಪಗಾರರು ಪ್ರತಿಮಾ ನಿರ್ಮಾಣಕ್ಕೆ ಅತ್ಯುತ್ತಮವಾದದು ಯಾವುದನ್ನು ಆಯ್ಕೆ ಮಾಡಿ ಪ್ರತಿಷ್ಠೆ ಮಾಡಲಾಗುತ್ತದೆ.


ಈಗಾಗಲೆ ರಾಮ ಮಂದಿರ ನಿರ್ಮಾಣಕ್ಕಾಗಿ ಮನೆ ಮನೆಗಳಿಂದ ಸಂಗ್ರಹಿಸಿರುವ, ಗ್ರಾಮ ಗ್ರಾಮಗಳಿಂದ ಸಂಗ್ರಹಿಸಿರುವ ಮಣ್ಣನ್ನು ರಾಮಮಂದಿರದ ತಳಪಾಯಕ್ಕೆ ಬಳಸಲಾಗಿದೆ. ಮುಂದಿನ ವರ್ಷ ಪ್ರಾಣ ಪ್ರತಿಷ್ಠಾ ಕಾಲದಲ್ಲಿ, ಬ್ರಹ್ಮಕಲಶೋತ್ಸವದಲ್ಲಿ ನಾಡಿನಾದ್ಯಂತ ‘ಭಕ್ತರು ಬರುವ ನಿರೀಕ್ಷೆಯಿದೆ. ‘ಭಕ್ತರಿಗೆ ಪ್ರಾಥಮಿಕ ಸೌಲ‘ಭ್ಯಗಳನ್ನು ನೀಡಲು 25 ಸಾವಿರ ಮಂದಿಗೆ ಅನುಕೂಲವಾಗುವಂತೆ ಅಗತ್ಯತೆ ಪೂರೈಸಲು ಟ್ರಸ್ಟ್ ಸಿದ್ಧತೆ ಕೈಗೊಂಡಿದೆ. ಒಮ್ಮೆ ಆಯೋಧ್ಯೆ‘ಗೆ ಹೊಕ್ಕರೆ ದೇಶದ ಸಂಸ್ಕೃತಿಗಳ ಅನಾವರಣವಾಗಬೇಕು ಎಂಬ ಆಶಯವಿದೆ ಎಂದರು.
ರಾಮಮಂದಿರ ಶತಶತಮಾನದ ಪೀಳಿಗೆಗೆ ಲಭಿಸುವ ಸಲುವಾಗಿ ಭವ್ಯ ಮಂದಿರ ಸ್ಥಾಪನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಮಂದಿರದ ಕನಸ್ಸು ನನಸಾಗುತ್ತಿದೆ, ಅದೇ ರೀತಿ ಪ್ರತಿ ಮನೆಯಲ್ಲಿ ಮಕ್ಕಳಿಗೆ ಸನಾತನ ‘ಧರ್ಮದ ಶಿಕ್ಷಣ ನೀಡಬೇಕು. ಎಲ್ಲರಿಗೂ ಶ್ರೀರಾಮನ ಅನುಗ್ರಹ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.

Related posts

ಕನಾ೯ಟಕ ದಲಿತ ಚಳುವಳಿಗೆ 50ರ ಸಂಭ್ರಮ: ಬೆಳ್ತಂಗಡಿಯಲ್ಲಿ ವಿವಿಧ ದಲಿತ ಸಂಘಟನೆಗಳ ಸಹಭಾಗಿತ್ವದಲ್ಲಿ ‘ಕನಾ೯ಟಕ ದಲಿತ ಚಳುವಳಿ 50ರ ಸಂಭ್ರಮ ಸಮಾವೇಶಕ್ಕೆ ಚಾಲನೆ; ದಲಿತ ಸಾಂಸ್ಕೃತಿಕ ವೈವಿಧ್ಯ ಕಾಯ೯ಕ್ರಮ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಜಾತ್ರೋತ್ಸವದ ಕಾರ್ಯಾಧ್ಯಕ್ಷರಾಗಿ ಶೈಲೇಂದ್ರ ಸುವರ್ಣ

Suddi Udaya

ಬಿಲ್ಡ‌ರ್ ಜಿತೇಂದ್ರ ಕೊಟ್ಟಾರಿಯವರ ಮನೆಗೆ ನುಗ್ಗಿ ಹಲ್ಲೆಗೆ ಯತ್ನ: ಎನ್.ಎಸ್.ಯು.ಐ ಕಾರ್ಯಕರ್ತ ಉಜಿರೆ ನಿವಾಸಿ ತನುಷ್ ಶೆಟ್ಟಿ ಮತ್ತು ಕದ್ರಿ ನಿವಾಸಿ ಅಂಕಿತ್ ಶೆಟ್ಟಿ ಬಂಧನ

Suddi Udaya

ಉಜಿರೆ ರಬ್ಬರ್ ಬೆಳೆಗಾರರ ಸಂಘದ ಮಾಜಿ ನಿರ್ದೇಶಕ ಅಬ್ರಹಾಂ ವಿ.ವಿ ನಿಧನ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ತಾಲೂಕಿನ ಅಭಿವೃದ್ದಿಯಲ್ಲಿ ಭ್ರಷ್ಟಾಚಾರ, ಸ್ಜಜನಪಕ್ಷಪಾತಕ್ಕೆ ಅವಕಾಶವಿಲ್ಲ- ರಕ್ಷಿತ್ ಶಿವರಾಂ ಭರವಸೆ

Suddi Udaya
error: Content is protected !!