ತಾಲೂಕು ಸುದ್ದಿರಾಜ್ಯ ಸುದ್ದಿ

ಇಂದಿನಿಂದ ಐಪಿಎಲ್ ಕ್ರಿಕೆಟ್ ಧಮಾಕಾ

ಬೆಳ್ತಂಗಡಿ: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಮತ್ತೆ ಬಂದಿದೆ. ರಾಜ್ಯದಲ್ಲಿ ಚುನಾವಣೆಯ ಬಿಸಿ ಏರಿರುವ ನಡುವೆ ದೇಶದ ಕ್ರಿಕೆಟ್ ಪ್ರೇಮಿಗಳಲ್ಲಿ ಐಪಿಎಲ್ ಕುತೂಹಲ ಗರಿಗೆದರಿದೆ

. ರಾಜಕಾರಣಿಗಳ ಮತಬೇಟೆ, ಮತದಾರರ ಹಕ್ಕು ಚಲಾವಣೆಯ ನಡುವೆ,ಕ್ರಿಕೆಟಿಗರ ವಿಕೆಟ್ ಬೇಟೆ, ರನ್ ದಾಹ, ಸಿಕ್ಸರ್- ಬೌಂಡರಿಗಳ ಸಿರಿಮಳೆ ಸಾಗಲಿದೆ. ಕರೋನಾ ಭೀತಿಯನ್ನೆಲ್ಲ ನಿವಾರಿಸಿಕೊಂಡು ಐಪಿಎಲ್ ತನ್ನ 16ನೇ ಆವೃತ್ತಿಯಲ್ಲಿ ಮತ್ತೆ ಹಿಂದಿನ ಸ್ವರೂಪ, ಸಂಭ್ರಮ, ಶ್ರೀಮಂತಿಕೆಯಲ್ಲೇ ಮರಳುತ್ತಿದೆ. ಟೂರ್ನಿಯಲ್ಲಿ ಆಡುವ ಎಲ್ಲ 10 ತಂಡಗಳು ಮತ್ತೆ ತಮ್ಮ ತವರು ತಾಣಗಳಲ್ಲೇ ಲೀಗ್ ಪಂದ್ಯಗಳನ್ನು ಆಡುವ ಅವಕಾಶ ಪಡೆದುಕೊಂಡಿವೆ. ಪ್ರೇಕ್ಷಕರೂ ಮತ್ತೆ ಶೇಕಡ 100 ಪ್ರಮಾಣದಲ್ಲಿ ಕ್ರೀಡಾಂಗಣಕ್ಕೆ ಮರಳುವ ಅವಕಾಶ ಪಡೆದುಕೊಂಡಿದ್ದಾರೆ. ಟಿವಿ ಜತೆಗೆ ಓಟಿಟಿ ವೇದಿಕೆಯಲ್ಲೂ ಐಪಿಎಲ್ ಮನರಂಜನೆ ಕ್ರಿಕೆಟ್ ಪ್ರೇಮಿಗಳ ಮನೆ- ಮೊಬೈಲ್ ತಲುಪಲಿದೆ. ಕಳೆದ ಆವೃತ್ತಿಯಲ್ಲಿ ಎರಡು ಹೊಸ ತಂಡಗಳು ಸೇರಿರುವುದರಿಂದ ಐಪಿಎಲ್ ಕುಟುಂಬವೂ ದೊಡ್ಡದಾಗಿದೆ.
ತಂಡಗಳು:
ಮುಂಬೈ ಇಂಡಿಯನ್ಸ್, ಕೋಲ್ಕತ ನೈಟ್’ರೈಡರ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಆರ್ ಸಿಬಿ, ಚೆನ್ನೈ ಸೂಪರ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್ , ಪಂಜಾಬ್ ಕಿಂಗ್ಸ್ , ಗುಜರಾತ್ ಟೈಟಾನ್ಸ್ , ಸನ್’ರೈಸರ್ಸ್ ಹೈದರಾಬಾದ್

Related posts

ಮೋಗೇರೋಡಿ ಕನ್ಸ್ಟ್ರಕ್ಷನ್ ನೆವದಿಂದ ನಾಳೆಯಿಂದ ಕಾಮಗಾರಿ ಆರಂಭ

Suddi Udaya

ಕೊಕ್ಕಡದ ಕಿಟ್ಟ ಮಲೆಕುಡಿಯರವರಿಗೆ ಕರ್ನಾಟಕ ಜಾನಪದ ಪರಿಷತ್‌ ಪ್ರಶಸ್ತಿ ಪ್ರದಾನ

Suddi Udaya

ನಿದ್ದೆ ಮಾತ್ರೆ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಕಲಾವಿದ ಮುಂಡಾಜೆಯ ಜಯರಾಂ ಕೆ. ಮೃತ್ಯು

Suddi Udaya

ಸುಲ್ಕೇರಿ ಶ್ರೀ ರಾಮ ಪ್ರೌಢ ಶಾಲೆಯ ಪ್ರಾರಂಭೋತ್ಸವ

Suddi Udaya

ಕುವೆಟ್ಟು, ಓಡಿಲ್ನಾಳ ಗ್ರಾಮದ ಕಾಂಗ್ರೆಸ್ ಬೂತ್ ಸಮಿತಿಯ ಸಭೆ

Suddi Udaya

ನಾರಾವಿ ಅರಸಕಟ್ಟೆ ಶ್ರೀ ಸೂರ್ಯ ಪ್ರೆಂಡ್ಸ್ ಮಂಚಕಲ್ಲು ನೂತನ ಸಮಿತಿ ರಚನೆ

Suddi Udaya
error: Content is protected !!