ವಿಧಾನ ಸಭಾ ಚುನಾವಣೆ:241 ಬೂತುಗಳ ಸೆಕ್ಟರ್ ಅಧಿಕಾರಿಗಳು ಹಾಗೂ ಬಿ.ಎಲ್.ಓ.ಗಳ ಸಭೆ

Suddi Udaya

ಬೆಳ್ತಂಗಡಿ: ಭಾರತ ಚುನಾವಣಾ ಆಯೋಗ ಇದರ ವತಿಯಿಂದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ-2023 ಇದರ ಅಂಗವಾಗಿ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಅಧಿಕಾರಗಳ ಸಭೆ ಎ.1 ರಂದು ಎಸ್.ಡಿ.ಎಂ. ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಚುನಾವಣಾಧಿಕಾರಿ ಯೋಗೀಶ್ ಹೆಚ್.ಆರ್., ಸಹಾಯಕ ಚುನಾವಣಾಧಿಕಾರಿ ಟಿ. ಸುರೇಶ್ ಕುಮಾರ್ ತಹಶೀಲ್ದಾರ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಕುಸುಮಾಧರ್, ಅಂಚೆ ಮತದಾನ ನೊಡೇಲ್ ರಾಜಶೇಖರ್ ಅಜ್ರಿ, ಸೆಕ್ಟರ್ ಅಧಿಕಾರಿ ಧರಣೇಂದ್ರ ಕೆ. ಉಪಸ್ಥಿತರಿದ್ದರು. 241 ಬೂತುಗಳ ಸೆಕ್ಟರ್ ಅಧಿಕಾರಿಗಳು ಹಾಗೂ ಬಿ.ಎಲ್.ಓ. ಗಳು ಉಪಸ್ಥಿತರಿದ್ದರು.

Leave a Comment

error: Content is protected !!