May 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿ

ಸ್ಪಂದನಾ ಸೇವಾ ಸಂಘದಿಂದ ವೈದ್ಯಕೀಯ ನೆರವು

ನಿಡ್ಲೆ : ನಿಡ್ಲೆ ಗ್ರಾಮದ ಬರಂಗಾಯ ಮಜಲ್ ಮಾರು ನಿವಾಸಿ ಸಂಜೀವ ಗೌಡ ಇವರ ಪುತ್ರಿ ಕುಮಾರಿ ದೀಪಿಕಾ ಇವರಿಗೆ ಅಸ್ತಿಮಜ್ಜೆ ಶಸ್ತ್ರಚಿಕಿತ್ಸಾ ಸಹಾಯಾರ್ಥವಾಗಿ ಸ್ಪಂದನಾ ಸೇವಾ ಸಂಘದಿಂದ ರೂ. 25 ಸಾವಿರ ಮತ್ತು ನಿಡ್ಲೆ ಗ್ರಾಮದ ನೆಡಿಲು, ಗಾಣಂತಿ, ನೂಜಿಲ ಬೈಲುವಾರು ಸಮಿತಿ ವತಿಯಿಂದ ಸಂಗ್ರಹವಾದ ರೂ 5,000 ವನ್ನು ಒಟ್ಟು ಸೇರಿಸಿ ಒಟ್ಟು ರೂ.30 ಸಾವಿರದ ಚೆಕ್ಕನ್ನು ಸೀತಾರಾಮ ಗೌಡ ಸೌರಭ ಬೆಳಾಲು ಇವರ ಮೂಲಕ ಫಲಾನುಭವಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿ ನಿರ್ದೇಶಕರಾದ ಸುರೇಶ್ ಕೌಡಂಗೆ, ಸ್ಪಂದನಾ ಸೇವಾ ಸಂಘದ ಸಂಚಾಲಕರಾದ ಮೋಹನ್ ಗೌಡ ಕೊಯ್ಯೂರು, ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರುಗಳಾದ ಮಹಾಬಲ ಗೌಡ ಮತ್ತು ಶ್ರೀಮತಿ ಮೀನಾಕ್ಷಿ, ತಾಲೂಕು ಯುವ ವೇದಿಕೆಯ ನಿರ್ದೇಶಕರಾದ ನಿತಿನ್ ಗೌಡ ಕಲ್ಮಂಜ, ನಿಡ್ಲೆ ಗ್ರಾಮ ಸಮಿತಿಯ ಯುವ ವೇದಿಕೆಯ ಕಾರ್ಯದರ್ಶಿ ರಾಜೇಂದ್ರ ಗೌಡ ನಿಡ್ಲೆ, ಮಂಜು ನಿಡ್ಲೆ, ಲೋಕೇಶ್ ಅಣಿಯೂರು ಮೊದಲಾದವರು ಉಪಸ್ಥಿತರಿದ್ದರು.

Related posts

ಸುರ್ಯಗುತ್ತು ಡಾ. ಸತೀಶ್ಚಂದ್ರ ಅವರ ಹಿರಿಯ ಸಹೋದರಿ ಬಂಟ್ವಾಳ ಇರ್ವತ್ತೂರು ಗುತ್ತು ಶ್ರೀಮತಿ ವಿಜಯಮ್ಮ ನಿಧನ

Suddi Udaya

ಧರ್ಮಸ್ಥಳ ಮಾನ್ವಿಶ್ರೀ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಕಲ್ಮಂಜದ ಮತಗಟ್ಟೆಗೆ ಶಾಸಕ ಹರೀಶ್ ಪೂಂಜ ಹಾಗೂ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್ ಭೇಟಿ

Suddi Udaya

ಬಳಂಜ ಶಾಲೆಯ ಹಳೆ ವಿದ್ಯಾರ್ಥಿ ಪ್ರವೀಣ್ ಜೈನ್ ಅವರಿಗೆ ಡಾಕ್ಟರೇಟ್ ಪದವಿ

Suddi Udaya

ಬೆಳ್ತಂಗಡಿ : ತಡೆಗೋಡೆ ಏಕಾಏಕಿ ಕುಸಿದು ಬಿದ್ದು ಓರ್ವ ಸಾವು

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya
error: Content is protected !!