ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಭಾಜಪ ವಿಧಾನ ಸಭಾ ಚುನಾವಣಾ ಕಚೇರಿ ಉದ್ಘಾಟನೆ

Suddi Udaya


ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ವತಿಯಿಂದ ಮುಂಬರುವ ಚುನಾವಣಾ ಹಿನ್ನಲೆಯಲ್ಲಿ ಬಿಜೆಪಿ ಚುನಾವಣಾ ಕಚೇರಿಯ ಉದ್ಘಾಟನೆಯು ವಾಣಿ ಕಾಲೇಜು ಬಳಿ ಎ.6ರಂದು ಜರುಗಿತು.


ಕಚೇರಿಯನ್ನು ಬಿಜೆಪಿಯ ಹಿರಿಯ ಮುಖಂಡರು ಹಾಗೂ ಹಿರಿಯ ನ್ಯಾಯವಾದಿಯವಾಗಿರುವ ನೇಮಿರಾಜ್ ಶೆಟ್ಟಿ ಪಡಂಗಡಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ತಾಲೂಕಿನಲ್ಲಿ ವಿಜಯ ಪಾತಕೆ ಹಾರಿಸಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ಶಾಸಕರ ತಂದೆ ಮುತ್ತಣ್ಣ ಪೂಂಜ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು., ಮಂಡಲ ಉಪಾಧ್ಯಕ್ಷ
ಸೀತಾರಾಮ ಬೆಳಾಲು, ಮಂಡಲ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಮಾಜಿ ಮಂಡಲ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸವಾಣಾಲು, ನಾರಾಯಣ ಭಟ್ ಮುಗುಳಿ.,ಶ್ರೀನಿವಾಶ ಕಿಣಿ ನಾರಾವಿ., ಕೊಕ್ಕಡ ಸಿ.ಎ.ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಜೆ. ಸುಬ್ರಹ್ಮಣ್ಯ ಕುಮಾರ ಅಗರ್ತ, ಪದ್ಮನಾಭ ಅರ್ಕಜೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಕೊರಗಪ್ಪ ಗೌಡ, ಸುಧೀರ್ ಸುವರ್ಣ.ನಗರ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದಗೌಡ, ಕೇಶವಭಟತ್ತಾಜೆ, ಸೀತಾರಾಮಬಿ.ಎಸ್, ಆನಂದಶೆಟ್ಟಿ ವಾತ್ಸಲ್ಯ,ಕೃಷ್ಣಯ್ಯಆಚಾರ್, ಸಂತೋಷ್ ಕುಮಾರ್ ಜೈನ್ ,ಲ್ಯಾನ್ಸಿ ಪಿಂಟೋ, ಅಹಮ್ಮದ್ ಬಾವ, ನಿರ್ಮಲ್‌ಕುಮಾರ್, ಸಂಜೀವಶೆಟ್ಟಿ ಮೊಗೇರೋಡಿ, ಪ್ರಾಸ್ಸಿಸ್‌ವಿ.ವಿ, ಬೆಳ್ತಂಗಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ಅಜಿತ್ ಅರಿಗ., ಬೆಳ್ತಂಗಡಿ ಚುನಾವಣೆ ಪ್ರಭಾರಿ ಆಶಾ ತಿಮ್ಮಪ್ಪ,ಕರುಣಾಕರಸಾಲ್ಯಾನುಪ್ಪಿನಂಗಡಿ, ಎಲ್ಲಾ ಪಂಚಾಯತ್ ಅಧ್ಯಕ್ಷರು ಸದಸ್ಯರು .ಎಲ್ಲಾ ಮಾಜಿ ತಾ.ಪ ಸದಸ್ಯರು ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!