ಗುರುವಾಯನಕೆರೆ: ಶ್ರೀ ವೇದವ್ಯಾಸ ಶಿಶುಮಂದಿರದ ಪುಟಾಣಿ ಮಕ್ಕಳಿಗೆ ಶಿಶು ಶಿಕ್ಷಣ ಪ್ರಮಾಣ ಪತ್ರ

Suddi Udaya

Updated on:

ಗುರುವಾಯನಕೆರೆ: ಇಲ್ಲಿಯ ಶಿವಾಜಿನಗರ ಶ್ರೀ ವೇದವ್ಯಾಸ ಶಿಶುಮಂದಿರದ ಪುಟಾಣಿ ಮಕ್ಕಳಿಗೆ ಶಿಶು ಶಿಕ್ಷಣ ಪ್ರಮಾಣ ಪತ್ರ ಹಾಗೂ ಇವರ ಜೊತೆ ಬಾಲಗೋಕುಲದ ಮಕ್ಕಳು ಸೇರಿ ಮಾತೃ ಪೂಜನೀಯ ಕಾರ್ಯಕ್ರಮವನ್ನು ಎ.9 ರಂದು ಹವ್ಯಕ ಭವನದಲ್ಲಿ ಮಾಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಇಂದುಮತಿ ಶ್ರೀ ವೇದವ್ಯಾಸ ಶಿಶು ಮಂದಿರ ಇವರು ವಹಿಸಿಕೊಂಡರು. ಶ್ರೀಮತಿ ಸುಧಾಮಣಿ ನಿರೂಪಿಸಿದರು. ಪುತ್ತೂರು ಶ್ರೀ ವಿವೇಕಾನಂದ ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿ ಶ್ರೀಮತಿ ಆಶಾ ಬೆಳ್ಳಾರೆ ಬೌದ್ಧಿಕ್ ನೀಡಿದರು.

ಕಾರ್ಯಕ್ರಮದಲ್ಲಿ ಮಾತ್ರ ಮಂಡಳಿಯ ಅಧ್ಯಕ್ಷೆ ಸ್ವಾತಿ, ಕೋಶಾಧಿಕಾರಿಯಾದ ಶ್ರೀಮತಿ ಪ್ರಿಯದರ್ಶಿನಿ, ಮಲ್ಲಿಕಾ, ಮಂಗಳ, ರಾಮಚಂದ್ರ ಶೆಟ್ಟಿ, ರತ್ನಾಕರ್ ರಾವ್, ದೇವಸ್ಯ ಸೋಮಶೇಖರ್ ದೇವಸ್ಯ, ಹೇಮಂತ್ ದೇವಸ್ಯ, ರಾಷ್ಟ್ರ ಸೇವಿಕಾ ಸಮಿತಿಯ ಸುಗುಣ, ಮಾತಾಜಿ ಯವರಾದ ಮಂಜುಳಾ ಮಾತಾಜಿ, ಅಶ್ವಿನಿ ಮಾತಾಜಿ ಹಾಜರಿದ್ದರು.

Leave a Comment

error: Content is protected !!