ದಿ| ಬಾಬು ಕುಡ್ತಡ್ಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ವೇಣೂರು ಸದಾಶಿವ ಕುಲಾಲ್ ಆಯ್ಕೆ

Suddi Udaya

ಬೆಳ್ತಂಗಡಿ : 2023ರ ಸಾಲಿನ ಬಾಬು ಕುಡ್ತಡ್ಕ ಪ್ರಶಸ್ತಿಗೆ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ವೇಣೂರು ಸದಾಶಿವ ಕುಲಾಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ವಸ್ತಿಕ್ ಕಲಾಕೇಂದ್ರ ಜಲ್ಲಿಗುಡ್ಡೆ ಮಂಗಳೂರು ಅವರು ಪುಟ್ಟಣ್ಣ ಕುಲಾಲ್‌ ಪ್ರತಿಷ್ಠಾನ ಪಡೀಲ್ ಇದರ ಆಶ್ರಯದಲ್ಲಿ ಸಮುದಾಯದ ಹಿರಿಯ ಪ್ರಸಿದ್ಧ ಧಿಮಂತ ಕಲಾವಿದರಾಗಿದ್ದ ದಿ. ಬಾಬು ಕುಡ್ತಡ್ಕ ಅವರ ಸವಿನೆನಪಿಗೆ ಪ್ರತೀ ವರ್ಷ ಕಲಾಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಾ ಬರುತ್ತಿದ್ದು, ಈ ವರ್ಷ ಸದಾಶಿವ ಕುಲಾಲ್ ‌ಅವರನ್ನು ಆಯ್ಕೆ ಮಾಡಲಾಗಿದೆ.
ಅ. 8ರಂದು ಮಂಗಳೂರು ಪುರಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದೆ.

Leave a Comment

error: Content is protected !!