ಧರ್ಮಸ್ಥಳ : ನೇರ್ತನೆಯಲ್ಲಿ ದನದ ಕರುವಿನ ಮೇಲೆ ಚಿರತೆ ದಾಳಿ

Suddi Udaya

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ನೇರ್ತನೆಯಲ್ಲಿ ಮನೆಯ ಸಮೀಪ ಕಟ್ಟಿ ಹಾಕಿದ್ದ ದನದ ಕರುವನ್ನು ಚಿರತೆಯು ದನದ ಹಟ್ಟಿಗೆ ನುಗ್ಗಿ ಕೊಂದು ತಿಂದ ಘಟನೆ ಎ.18 ರಂದು ಮುಂಜಾನೆ 4 ಗಂಟೆಗೆ ನಡೆದಿದೆ.

ಪಂದಮಕ್ಕಲ್ ಮನೆಯ ನಿವಾಸಿ ತೇಸ್ಯಾಮ್ಮ ಪಿ.ಕೆ ಎಂಬವರ ಮನೆಯ ದನ ಇದ್ದಾಗಿದೆ.

ನೇರ್ತನೆ ಪರಿಸರದಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಹಾಗೂ ಆನೆಗಳ ಹಾವಳಿ ತುಂಬಾ ಹೆಚ್ಚಾಗಿದ್ದು ಕೃಷಿಕರು ಆತಂಕದಲ್ಲಿಯೇ ಬದುಕುವ ಸ್ಥಿತಿ ಎದುರಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಈ ಪರಿಸರದಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು ರಾತ್ರಿ ಹಾಗೂ ಬೆಳಗಿನ ಜಾವ ಹೊರ ಬರಲು ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ.

Leave a Comment

error: Content is protected !!