ಸ್ಪೀಚ್ ಕ್ರಾಪ್ಟ್ ತರಬೇತಿಯಲ್ಲಿ ಚಂದ್ರಹಾಸ ಬಳಂಜರವರಿಗೆ ಪ್ರಶಸ್ತಿ

Suddi Udaya

ಬೆಳ್ತಂಗಡಿ: ಜೆಸಿಐ ವತಿಯಿಂದ ಮೂರು ದಿವಸಗಳ ಕಾಲ ನಡೆಯುವ ವಲಯದ ಅತ್ಯುತ್ತಮ‌ ತರಬೇತಿ ಕಾರ್ಯಕ್ರಮಗಳಲ್ಲಿ ಒಂದಾದ ಸ್ಪೀಚ್ ಕ್ರಾಪ್ಟ್ ತರಬೇತಿ ಕಾರ್ಯಾಗಾರ ಎ.14-16 ರವರೆಗೆ ನಿಟ್ಟೆಯಲ್ಲಿ ನಡೆಯಿತು.

ಕೇವಲ‌ 30 ಜನ ಶಿಬಿರಾರ್ಥಿಗಳು ಮಾತ್ರ ಭಾಗವಹಿಸುವ ಈ ತರಬೇತಿ ಕಾರ್ಯಾಗಾರದಲ್ಲಿ ಮಾತುಗಾರಿಕೆಯ ಬಗ್ಗೆ ವಿವಿಧ ರೀತಿಯ ತರಬೇತಿಗಳನ್ನು ನೀಡಲಾಗಿತ್ತು. ಬೆಂಗಳೂರಿನ‌ ಅನುರಾಧ, ಹಾಗೂ ಮಂಗಳೂರಿನ ರಾಘವೇಂದ್ರ ಹೊಳ್ಳ, ಪ್ರಜಾಶ್ ಪೂಜಾರಿ ನಡೆಸಿದ ಈ ತರಬೇತಿಯಲ್ಲಿ ಜೇಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಭಾಗವಹಿಸಿದ ಸದಸ್ಯ ಚಂದ್ರಹಾಸ ಬಳಂಜ ತಮ್ಮ ಮಾತುಗಾರಿಕೆಯಿಂದ, ಪ್ರತಿಭೆಯಿಂದ ಉತ್ತಮ ರೀತಿಯಲ್ಲಿ ತರಬೇತಿಯಲ್ಲಿ ಪಾಲ್ಗೊಂಡು ಔಟ್ ಸ್ಟ್ಯಾಂಡಿಗ್ ಪಾರ್ಟಿಸಿಪೆಂಟ್ ಆಗಿ ಮೂಡಿ ಬಂದಿದ್ದಾರೆ.

ಬೆಂಗಳೂರು, ಪುತ್ತೂರು, ಉಡುಪಿ, ಕುಂದಾಪುರ, ಮಂಗಳೂರಿನಿಂದ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Leave a Comment

error: Content is protected !!