ವಿಧಾನಸಭಾ ಚುನಾವಣೆಗೆ ಪಕ್ಷೇತರರಾಗಿ ಮಹೇಶ್ ನಾಮಪತ್ರ

Suddi Udaya

ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಮಲೆಬೆಟ್ಟು ನೀರಕಜೆ ಮನೆಯ ಮಹೇಶ್ ಎ.19ರಂದು ವಿಧಾನ ಸಭಾ ಚುನಾವಣೆಗೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಸೊಮ ಮತ್ತು ಜಾನಕಿ ದಂಪತಿಯ ಪುತ್ರನಾಗಿರುವ ಇವರು ವಿದ್ಯಾಭ್ಯಾಸದ ಬಳಿಕ ಮೂಡಿಗೆರೆ ಬಸ್ಕಲ್, ಅಂಡಿಂಜೆ, ಪ್ರಸ್ತುತ 7 ವರ್ಷಗಳಿಂದ ಕೊಯ್ಯೂರು ಮಲೆಬೆಟ್ಟು ಹೀಗೆ ಒಟ್ಟು‌11 ವರ್ಷಗಳಿಂದ ಅಟೋ ಚಾಲಕನಾಗಿ ಪ್ರಾಮಾಣಿಕವಾಗಿ ದುಡಿದಿದ್ದಾರೆ.
ವೃತ್ತಿಯ ಜೊತೆಗೆ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.

Leave a Comment

error: Content is protected !!