ಹೆದ್ದಾರಿ ಬದಿ ಬೆಂಕಿ

Suddi Udaya

ಉಜಿರೆ: ಮುಂಡಾಜೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಕಾಪು ಬಳಿ ವಿದ್ಯುತ್ ಲೈನ್ ನಿಂದ ಕಿಡಿಗಳು ಹಾರಿದ ಪರಿಣಾಮ ಬೆಂಕಿ ಹರಡಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಅರಣ್ಯ ಇಲಾಖೆಯ ಕಾಪು ಸಸ್ಯ ಕ್ಷೇತ್ರದ ಸಮೀಪವೇ ಬೆಂಕಿ ಅವಘಡ ನಡೆದಿದೆ. ಸಮಾಜ ಸೇವಕ ಸಚಿನ್ ಭಿಡೆ ಹಾಗೂ ಸಸ್ಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯರು ತಕ್ಷಣ ಕಾರ್ಯಪ್ರವರ್ತರಾಗಿ ಬೆಂಕಿ ನಂದಿಸಿದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.

ಬೆಂಕಿ ಆರಿಸಲು ತಡವಾಗುತ್ತಿದ್ದರೆ ಸಸ್ಯಕ್ಷೇತ್ರದ ಒಳಗೂ ನುಗ್ಗಿ ಮಳೆಗಾಲದ ವಿತರಣೆಗೆ ಸಿದ್ಧವಾಗುತ್ತಿರುವ ನಾನಾ ಜಾತಿಯ ಹಲವು ಸಾವಿರ ಗಿಡಗಳಿಗೆ ಹಾನಿ ಸಂಭವಿಸುವ ಸಾಧ್ಯತೆ ಇತ್ತು.

Leave a Comment

error: Content is protected !!