ಇಂದಬೆಟ್ಟು: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರಿಂದ ಕಾರ್ಯಕರ್ತರೊಂದಿಗೆ ಸಮಾಲೋಚನೆ ಸಭೆ

Suddi Udaya

ಇಂದಬೆಟ್ಟು ಗ್ರಾಮದ ನೇತ್ರಾವತಿ ನಗರದ ಎಸ್.ಸಿ ಕಾಲೋನಿ ಸ್ಥಳೀಯ ಕಾರ್ಯಕರ್ತರೊಂದಿಗೆ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ರವರು ಸಮಾಲೋಚನೆಯನ್ನು ಹಿರಿಯರಾದ ಡೀಕಯ್ಯ ಮುಗೇರ ರವರ ಮನೆಯಲ್ಲಿ ನಡೆಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಆನಂದ ಅಡಿಲು, ಉಪಾಧ್ಯಕ್ಷೆ ಶ್ರೀಮತಿ ಆಶಾಲತಾ ಸದಸ್ಯರಾದ ಶ್ರೀಮತಿ ಸುಮಿತ್ರಾ, ಶ್ರೀಕಾಂತ್ ಎಸ್ ಇಂದಬೆಟ್ಟು, ಪಿಎಲ್.ಡಿ ಬ್ಯಾಂಕ್ ಉಪಾಧ್ಯಕ್ಷರಾದ ಸಂತೋಷ್ ಗೌಡ, ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಜಯಾನಂದ ಗೌಡ, ಗಂಗಾಧರ ಎಸ್ ಪರಾರಿ, ಶ್ರೀಧರ ಮುಗೇರ, ಕರಿಯ ಮುಗೇರ, ರುಕ್ಮಯ ದುಗ್ಗಬೆಟ್ಟು, ಸುಂದರ ಎ ಇಂದಬೆಟ್ಟು ಹಾಗೂ ಸ್ಥಳೀಯ ಹಿರಿಯ ಹಾಗೂ ಕಿರಿಯ ಬಂಧುಗಳು ಮಹಿಳೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರನ್ನು ಸ್ಥಳೀಯ ಬಂಧುಗಳು ಸನ್ಮಾನಿಸಿ ಗೌರವಿಸಿದರು.

Leave a Comment

error: Content is protected !!