ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ “ತನ್’ಶೀತ್ವ್” ದ‌ಅ್‌ವಾ ಕ್ಯಾಂಪ್

Suddi Udaya

ಬೆಳ್ತಂಗಡಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ವತಿಯಿಂದ “ತನ್’ಶೀತ್ವ್” ದ‌ಅ್‌ವಾ ಕ್ಯಾಂಪ್ 2023 ಎ.27 ರಂದು ಮಲ್‌ಜ‌ಅ್ ಕ್ಯಾಂಪಸ್ ಉಜಿರೆ ಯಲ್ಲಿ ನಡೆಯಿತು.

ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಅಧ್ಯಕ್ಷರಾದ ಶಾಫಿ ಮದನಿ ಅಲ್ ಫುರ್ಖಾನಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಎಸ್ಸೆಸ್ಸೆಫ್ ರಾಜ್ಯ ರೀಡ್‌ಪ್ಲಸ್ ಕಾರ್ಯದರ್ಶಿ ಎಂ.ಶರೀಫ್ ಬೆರ್ಕಳ ಕಾರ್ಯಕ್ರಮದ ಉದ್ಘಾಟಿಸಿದರು.
ಎಸ್‌ವೈ‌ಎಸ್ ರಾಜ್ಯ ನಾಯಕರಾದ ಜಿ.ಮುಹಮ್ಮದ್ ಕಾಮಿಲ್ ಸಖಾಫಿ ಹಾಗೂ ಎಸ್ಸೆಸ್ಸೆಫ್ ದ.ಕ ಜಿಲ್ಲೆ ಈಸ್ಟ್ ಅಧ್ಯಕ್ಷರಾದ ಮುಹಮ್ಮದ್ ಮಿಸ್ಬಾಹಿ ತರಗತಿಯನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ನಾಯಕರಾದ ಸಲೀಂ ಕನ್ಯಾಡಿ, ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಕೋಶಾಧಿಕಾರಿ ಇಸಾಕ್ ಅಳದಂಗಡಿ, ಕ್ಯಾಂಪಸ್ ಕಾರ್ಯದರ್ಶಿ ಎಂ.ಮುಬೀನ್, ಕಲ್ಚರಲ್ ಕಾರ್ಯದರ್ಶಿ ನಾಸಿರ್ ಪಡ್ಡಂದಡ್ಕ, ರೈಂಬೋ ಕಾರ್ಯದರ್ಶಿ ಬಾಸಿತ್ ಮುಈನಿ ನಾವೂರು, ಸದಸ್ಯರಾದ ಲತೀಫ್ ಅಹ್ಸನಿ ಅನ್ಸಾರ್ ಸ‌ಅದಿ ಮಾಚಾರು ಹಾಗೂ ಡಿವಿಷನ್ ವ್ಯಾಪ್ತಿಯ ದ‌ಅ್‌ವಾ ವಿಧ್ಯಾರ್ಥಿಗಳು ಹಾಗೂ ಉಸ್ತಾದರು ಉಪಸ್ಥಿತರಿದ್ದರು.

ಸದಸ್ಯರಾದ ಲತೀಫ್ ಅಹ್ಸನಿ ಸ್ವಾಗತಿಸಿ ಕ್ಯಾಂಪಸ್ ಕಾರ್ಯದರ್ಶಿ ಎಂ.ಮುಬೀನ್ ಉಜಿರೆ ವಂದಿಸಿದರು.

ವರದಿ : ಎಂ.ಎಂ.ಉಜಿರೆ

Leave a Comment

error: Content is protected !!