ಕುತ್ಲೂರು : ಬಿಜೆಪಿಯಿಂದ ಮನೆ‌ ಮನೆ ಭೇಟಿ ಕಾರ್ಯಕ್ರಮ

Suddi Udaya

ಕುತ್ಲೂರು: ಕುತ್ಲೂರು ಗ್ರಾಮದಲ್ಲಿ ವಿಧಾನಸಭಾ ಚುನಾವಣೆ ಕಾವು ಏರುತ್ತಿದ್ದು ಭಾಜಪಾ ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿದೆ.
ಗ್ರಾಮದ ವಾರ್ಡ್ 5 ಮತ್ತು 6 ರಲ್ಲಿ ಮನೆ ಮನೆಗೆ ಭೇಟಿ ನೀಡಿ‌ ಮತದಾರರನ್ನು ಮನವೊಲಿಸುವಲ್ಲಿ ತಂಡ ನಿರತರಾಗಿದ್ದು ಗ್ರಾಮಕ್ಕೆ ಶಾಸಕರು ನೀಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಗ್ರಾಮದ ಪ್ರತೀ ಸದಸ್ಯರು ಸಂತಸ ಹಂಚಿಕೊಳ್ಳುತ್ತಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದರು.

ಮುಖ್ಯವಾಗಿ ಕುಕ್ಕುಜೆ ಸೇತುವೆ ಮತ್ತು ಕುಕ್ಕುಜೆಯಿಂದ ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಮಲೆಕುಡಿಯ ಸಮುದಾಯದ ಅಲ೦ಬದ ಜನರಿಗೆ ಸಂಪರ್ಕ ವ್ಯವಸ್ಥೆಗೆ ಮರು ಡಾಮರೀಕರಣ ಯೋಜನೆ ಪ್ರಮುಖವಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಸಮಿತಿ ‌ಅಧ್ಯಕ್ಷ ರಾಮಚಂದ್ರ ಭಟ್, ಬೂತ್ ಅಧ್ಯಕ್ಷ ರತ್ನಾಕರ ಪೂಜಾರಿ ಬಡೆಕ್ಕಲ , ಪಂಚಾಯಿತಿ ಸದಸ್ಯ ಸಂತೋಷ ಪೂಜಾರಿ ಮರ್ದೊಟ್ಟು , ಸಂದೀಪ್ ಪೂಜಾರಿ, ಕರಿಯ ಪೂಜಾರಿ , ವಿಶ್ವನಾಥ್ ಪೂಜಾರಿ , ಉಷಾ ಪೂಜಾರಿ , ಕೃಷ್ಣಪ್ಪ ಪೂಜಾರಿ , ಡಾಕಯ್ಯ ಪೂಜಾರಿ , ರಾಜು ಪೂಜಾರಿ , ಸುಧಾಕರ್ ಜತೆಗಿದ್ದರು.

Leave a Comment

error: Content is protected !!