ಪೆರಿಂಜೆ: ಕಾರು ಹಾಗೂ ರಿಕ್ಷಾ ನಡುವೆ ಭೀಕರ ರಸ್ತೆ ಅಪಘಾತ

Suddi Udaya

ಪೆರಿಂಜೆ: ಧರ್ಮಸ್ಥಳದಿಂದ ಕಟೀಲಿಗೆ ತೆರಳುತ್ತಿದ್ದ ತುಮಕೂರು ಮೂಲದ ಡಸ್ಟರ್ ಕಾರು ಹಾಗೂ ಕಣ್ಣಂಗಾರಿನಿಂದ ಗೇರುಕಟ್ಟೆ ಕಡೆ ಬರುತ್ತಿದ್ದ ರಿಕ್ಷಾ ಪೆರಿಂಜೆಯ ಶಾಲಾ ಬಳಿ ಮೇ.1ರಂದು ಭೀಕರ ಅಪಘಾತ ನಡೆದಿದೆ.

ರಿಕ್ಷಾದಲ್ಲಿ ಸಣ್ಣ ಮಗು ಸೇರಿ 5 ಜನರಿಗೆ ಗಂಭೀರ ಗಾಯವಾಗಿದ್ದು, ಹೊಸಂಗಡಿ ಪಂಚಾಯತ್ ಸದಸ್ಯ ಹರಿಪ್ರಸಾದ್, ಮತ್ತಿತ್ತರು ಗಾಯಾಳುಗಳನ್ನು ಆಳ್ವಾಸ್ ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿದರು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕಳುಹಿಸಲಾಯಿತು.

ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

error: Content is protected !!