26.1 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪುಂಜಾಲಕಟ್ಟೆಯಲ್ಲಿ ಹೆಸರಾಂತ ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್‍ಸ್ ವಿಸ್ತೃತ ನೂತನ ಮಳಿಗೆಯ ಶುಭಾರಂಭ

ಪುಂಜಾಲಕಟ್ಟೆ: ನಂಬಿಕೆ ಮತ್ತು ಪರಿಶುದ್ಧತೆಗೆ ಸಮನಾರ್ಥವಾಗಿ ಸುಮಾರು 86 ವರ್ಷಗಳ ಸುಧೀರ್ಘ ಅನುಭವದೊಂದಿಗೆ ಚಿನ್ನಾಭರಣ ಪ್ರೀಯರ ನೆಚ್ಚಿನ ಮಳಿಗೆಯಾದ ಬಿ.ಪುಂಡಲೀಕ ಬಾಳಿಗಾ & ಸನ್ಸ್ ಜ್ಯುವೆಲ್ಲರ್ಸ್ ವಿಸ್ತೃತ ನೂತನ ಮಳಿಗೆ ಮೇ.3 ರಂದು ಶುಭಾರಂಭಗೊಂಡಿತು.

ಕಳೆದ 8 ದಶಕಗಳ ಹಿಂದೆ ಬಿ. ಪುಂಡಲೀಕ ಬಾಳಿಗ ರವರು ಚಿನ್ನಾಭರಣ ಮಳಿಗೆಯನ್ನು ಸ್ಥಾಪಿಸಿ ಜಿಲ್ಲೆಯ ಪ್ರಸಿದ್ದ ಸಂಸ್ಥೆಗಳಲ್ಲಿ ಪುಂಜಾಲಕಟ್ಟೆಯ ಪುಂಡಲೀಕ ಬಾಳಿಗ ಕೂಡ ಒಂದಾಗಿದೆ.


ಸ್ವರ್ಣೋದ್ಯಮದೊಂದಿಗೆ ಸಮಾಜಸೇವೆಯನ್ನು ಉಸಿರಾಗಿಸಿಕೊಂಡು ಜಿಲ್ಲೆಯಾದ್ಯಂತ ನಡೆಯುವ ಹಲವಾರು ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ ಬರುತ್ತಿರುವ ಸಂಸ್ಥೆಯು ನೂರಾರು ಮಂದಿಗೆ ಉದ್ಯೋಗ ನೀಡಿದೆ. ವಿಶೇಷವಾಗಿ ಸಂಸ್ಥೆಯು ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿ, ಉದ್ಯಮದಲ್ಲಿ ಬಲವಾದ ಪರಂಪರೆಯನ್ನು ಸೃಷ್ಟಿಸಿದೆ.


ವಿಶಾಲವಾದ ಸುಸಜ್ಜಿತ ಕಟ್ಟಡದಲ್ಲಿ ಬಂಗಾರದ ವಿನ್ಯಾಸ ಹೊಸತನವನ್ನು ಅನುಭವಿಸಿ, ಆಕರ್ಷಕ ಆಭರಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.

ಮಳಿಗೆಯನ್ನು ಬಿ. ಪುರುಷೋತ್ತಮ ಬಾಳಿಗಾ- ಚಂದ್ರಕಲಾ ಬಾಳಿಗಾ, ಬಿ. ರವೀಂದ್ರ ಬಾಳಿಗಾ- ರೇಖಾ ಬಾಳಿಗಾ,ದಿನೇಶ್ ಪೈ-ಪ್ರಭಾ ಡಿ ಪೈ, ಬಿ. ಪ್ರಶಾಂತ ಬಾಳಿಗಾ-ದಿವ್ಯಾ ಬಾಳಿಗಾ ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು. ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು

ಶುಭಾರಂಭದ ಪ್ರಯುಕ್ತ ಮಳಿಗೆಗೆ ಗ್ರಾಹಕರು ಆಗಮಿಸಿ ಶುಭಹಾರೈಸುತ್ತಿದ್ದಾರೆ.

Related posts

ಲಯನ್ಸ್ ಕ್ಲಬ್ ವತಿಯಿಂದ ಸುಲ್ಕೇರಿ ಕೋಲ್ಯಾಯದಲ್ಲಿ ನದಿಯ ಅಣೆಕಟ್ಟಿಗೆ ಸಿಲುಕಿಕೊಂಡಿದ್ದ ಮರದ ದಿಮ್ಮಿ, ಕಸಕಡ್ಡಿಗಳ ತೆರವು ಕಾರ್ಯ

Suddi Udaya

ಮಧುವನಗಿತ್ತಿಯಂತೆ ಅಲಂಕಾರಗೊಂಡ ತೆಂಕಕಾರಂದೂರು ಮತಗಟ್ಟೆ: ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿರುವ ಮತದಾರರು

Suddi Udaya

ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಸಾಧನೆಗೈದ “ಮುಸ್ಕಾನ್ ಕೌಸರ್” ರಿಗೆ ಬ್ಯಾರೀಸ್‌ ವೆಲ್‌ಫೇ‌ರ್ ಅಸೋಸಿಯೇಷನ್ ಮೂಲಕ ಶಿಕ್ಷಣ ಸಚಿವರಿಂದ ಸನ್ಮಾನ

Suddi Udaya

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇಗುಲದ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿ: ಡಿ.24 ರಿಂದ 28 ರವರೆಗೆ ವಿಜೃಂಭಣೆಯ ಬ್ರಹ್ಮಕಲಶೋತ್ಸವ ಸಂಭ್ರಮ, ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ ಕಾರ್ಯ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಬೆಳ್ತಂಗಡಿ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೃತಜ್ಞತಾ ಸಮಾರಂಭ

Suddi Udaya
error: Content is protected !!