ರಕ್ಷಿತ್ ಶಿವರಾಂರವರ ಕಾರ್ಯವೈಖರಿ ಮೆಚ್ಚಿ ಕಾಂಗ್ರೆಸ್ ಸೇರ್ಪಡೆಗೊಂಡ ಅಳದಂಗಡಿಯ ಯುವಸಮೂಹ

Suddi Udaya

ಅಳದಂಗಡಿ: ಅಳದಂಗಡಿಯಲ್ಲಿ ರಕ್ಷಿತ್ ಶಿವರಾಮ್ ಅವರ ಕಾರ್ಯವೈಖರಿ ಮೆಚ್ಚಿ ಹಲವಾರು ಮಂದಿ ಸಂದೀಪ್ ನೀರಲ್ಕೆರವರ ನೇತೃತ್ವದಲ್ಲಿ ಕಾಂಗ್ರೇಸ್ ಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ನಿವೃತ ಪೋಲೀಸ್ ಅಧಿಕಾರಿ ಬಿ ಕೆ ಶಿವರಾಂ, ನಿವೃತ್ತ ಎಸ್ ಪಿ ಪೀತಾಂಬರ ಹೆರಾಜೆ, ಖ್ಯಾತ ಚಿತ್ರನಟ ವಿಜಯರಾಘವೇಂದ್ರ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷರಾದ ಶೈಲೇಶ್ ಕುಮಾರ್, ಎಐಸಿಸಿ ವೀಕ್ಷಕರಾದ ಸಜೀವ್ ಜೋಸೆಫ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಹರೀಶ್, ಸಾಮಾಜಿಕ ಜಾಲತಾಣ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್ ಎಸ್ ನೀರಲ್ಕೆ ಅರ್ವ, ಪ್ರಮುಖರಾದ ಸಂಜೀವ ಪೂಜಾರಿ ಕೊಡಂಗೆ, ಧರ್ಣಪ್ಪ ಪೂಜಾರಿ ದೋರಿಂಜ, ಮಬ್ಯಾಸುದ್ದೀನ್,ಪ್ರಕಾಶ್,ಜಯಂತಿ ದೋರಿಂಜ,ಜಿನ್ನಪ್ಪ ಪೂಜಾರಿ ಮತ್ತಿತರರ ಉಪಸ್ಥಿತರಿದ್ದರು.

ಹರೀಶ್ ಮುಡಾಯಿಹಿತ್ತಿಲು, ನೌಶಾದ್, ಮನೋಜ್ ಬಿಕ್ಕಿರ, ಪ್ರಶಾಂತ್,ತನ್ಸೀಫ್, ಯೋಗಿಶ್, ವಿನೋದ್ ಮತ್ತಿತರ ಪ್ರಮುಖರ ಯುವ ನಾಯಕರ ಸೇರ್ಪಡೆಗೊಂಡರು.

Leave a Comment

error: Content is protected !!