ಕೊಕ್ಕಡ : ಮಾಯಿಲಕೋಟೆ ಸೀಮೆ ದೈವಗಳ ಪ್ರಥಮ ವಾರ್ಷಿಕ ನೇಮೋತ್ಸವ

Suddi Udaya

ಕೊಕ್ಕಡ : ಮಾಯಿಲಕೋಟೆ ಸೀಮೆ ದೈವಸ್ಥಾನ ಟ್ರಸ್ಟ್ ವತಿಯಿಂದ ಮಾಯಿಲಕೋಟೆ ಸೀಮೆ ದೈವಗಳ ಪ್ರಥಮ ವಾರ್ಷಿಕ ನೇಮೋತ್ಸವವು ಕ್ಷೇತ್ರದ ತಂತ್ರಿಗಳಾದ ಕೆ. ವಿ. ಪದ್ಮನಾಭ ತಂತ್ರಿ ಎಡಮನೆ ಅರವತ್ತು ನೀಲೇಶ್ವರ ಕೇರಳ ಇವರ ನೇತೃತ್ವದಲ್ಲಿ ಮೇ.13ರಂದು ಜರುಗಿತು.

ಮೇ.12ರಂದು ಸಂಜೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಅನ್ನ ಸಂತರ್ಪಣೆ, ಮೇ.13ರಂದು ಬೆಳಿಗ್ಗೆ ಗಣಹೋಮ, ಐಕ್ಯ ಸೂಕ್ತ ಹೋಮ, ಭಾಗ್ಯ ಸೂಕ್ತ ಹೋಮ, ನವಕ ಕಲಶ ಮತ್ತು ದೈವಗಳಿಗೆ ತಂಬಿಲ ಸೇವೆ, ವಿವಿಧ ತಂಡಗಳಿಂದ ಭಜನಾ ಕಾರ್ಯಕ್ರಮ, ಹಸಿರು ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಶ್ರೀ ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ಕೋಟೆ ಚಾಮುಂಡಿ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಿತು.

Leave a Comment

error: Content is protected !!