ಎರಡನೇ ಬಾರಿಗೆ ಕನಾ೯ಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ : ವಿಜಯೋತ್ಸವ

Suddi Udaya

Updated on:

ಬೆಳ್ತಂಗಡಿ: ಎರಡನೇ ಬಾರಿಗೆ ಕನಾ೯ಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಇದರ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಕಚೇರಿ ಬಳಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಮಾಡುವ ಕಾಯ೯ಕ್ರಮ ವೀಕ್ಷಣೆ ಅವಕಾಶ ಮಾಡಲಾಗಿತ್ತು.


ಮಾಜಿ ಶಾಸಕ ಕೆ.ವಸಂತ ಬಂಗೇರ, ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಉಭಯ ಘಟಕಗಳ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್, ರಂಜನ್ ಗೌಡ, ಪ್ರಮುಖರಾದ ರಾಜಶೇಖರ ಅಜ್ರಿ, ಎ.ಸಿ‌ ಮ್ಯಥ್ಯು, ನಾಮದೇವ ರಾವ್,
ಆಶ್ರಫ್ ನೆರಿಯ, ಮನೋಹರ ಇಳಂತಿಲ, ಜಗದೀಶ್ ಡಿ, ಜನಾದ೯ನ್, ಮೋಹನ್ ಶೆಟ್ಟಿಗಾರ್ , ಚಂದು ಎಲ್, ಬಿ.ಕೆ ವಸಂತ, ಭರತ್ ಕುಮಾರ್, ರಮೇಶ್ ಆರ್, ಪುಷ್ಪಾರಾಜ್ ಶಿಲಾ೯ಲು, ರವೀಂದ್ರ ಪೂಜಾರಿ, ಸುಭಾಶ್ಚಂದ್ರ ರೈ , ವಿವಿಧ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಕಾಯ೯ಕತ೯ರುಗಳು ಉಪಸ್ಥಿತರಿದ್ದರು.

Leave a Comment

error: Content is protected !!