ಬೆಳ್ತಂಗಡಿ ತಾಲೂಕಿನ ಕೆಲವೆಡೆ ಉತ್ತಮ ಮಳೆ

Suddi Udaya

ಬೆಳ್ತಂಗಡಿ : ತಾಲೂಕಿನ ವಿವಿಧೆಡೆ ರವಿವಾರ ಸಂಜೆ ಉತ್ತಮ ಮಳೆಯಾಗಿದೆ.ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ಮುಂಡಾಜೆ, ಕಕ್ಕಿಂಜೆ, ನೆರಿಯ, ಉಜಿರೆ, ಧರ್ಮಸ್ಥಳ, ಕಡಿರುದ್ಯಾವರ ಸಹಿತ ಇತರೆಡೆ ಉತ್ತಮ ಮಳೆಯಾಗಿದೆ.

ಮಿಂಚು ಸಹಿತ ಮಳೆಯಾಗಿದ್ದು, ಬಾಂಜಾರು ಮಲೆ ಸಾಗುವ ಒಳ ರಸ್ತೆಯಲ್ಲಿ ಮರ ಬಿದ್ದು ಊರಿಗೆ ಹೋಗುವ ಮಂದಿಗೆ ಸುಮಾರು ಎರಡು ತಾಸು ಸಮಸ್ಯೆ ಎದುರಿಸುವಂತಾಯಿತು. ಸ್ಥಳೀಯರ ಸಹಾಯದಿಂದ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ.ಕಕ್ಕಿಂಜೆ ಮೆಸ್ಕಂ ವ್ಯಾಪ್ತಿಗೆ ಸೇರಿದ ಕಡಿರುದ್ಯಾವರ ಚಾರ್ಮಾಡಿ ಹಾಗೂ ಮುಂಡಾಜೆ,‌ ತೋಟತ್ತಾಡಿಯಲ್ಲಿ ಒಟ್ಟು 8 ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.

Leave a Comment

error: Content is protected !!