ಕೊಕ್ಕಡ: ನಿವೃತ್ತ ಅಧ್ಯಾಪಕ ಕುಂ‌‌ಞಪ್ಪ ಗೌಡ ದಂಪತಿ ಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ: ಸಂಘ ಸಂಸ್ಥೆಗಳಿಗೆ ಧನಸಹಾಯ

Suddi Udaya

ಕೊಕ್ಕಡ: ಕೊಕ್ಕಡ ಗ್ರಾಮದ ಕೊಲ್ಲಾಜೆ ಮನೆಯ ನಿವೃತ್ತ ಅಧ್ಯಾಪಕರಾದ ಶ್ರೀಮತಿ ಸುಂದರಿ ಹಾಗೂ ಕುಂ‌‌ಞಪ್ಪ ಗೌಡ ರವರು ಮನೆಯ ನವೀಕರಣ ಮಾಡಿದ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆಯು ಮೇ 21 ರಂದು ನೆರವೇರಿತು.

ಈ ಸಂದರ್ಭದಲ್ಲಿ ಪಟ್ಟೂರು ಶ್ರೀರಾಮ ಶಾಲೆಗೆ ರೂ. 10,000 “ವಿದ್ಯಾನಿಧಿ” ಸಮರ್ಪಣೆ ಮಾಡಿದರು . ಅದೇ ರೀತಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ “ಮಂಗಳ ನಿಧಿ”ಯಾಗಿ ರೂ.10,000 ಮತ್ತು ಸೌತಡ್ಕ ಸೇವಾಧಾಮದಲ್ಲಿರುವ ಬೆನ್ನುಹುರಿ ಮುರಿತಕ್ಕೊಳಗಾದವರಿಗೆ ಧನ ಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ, ಆರ್ ಎಸ್ ಎಸ್ ನ ಉಜಿರೆ ತಾಲೂಕಿನ ಸಹ ಕಾರ್ಯವಾಹ ಪ್ರಜ್ವಲ್, ಆರ್ ಎಸ್ ಎಸ್ ನ ಉಜಿರೆ ತಾಲೂಕಿನ ಪ್ರಚಾರ ಪ್ರಮುಖ್ ಗಣೇಶ್ ಪಿತ್ತಿಲು, ಕೊಕ್ಕಡ ಮಂಡಲ ಪ್ರಮುಖ್ ಚಂದ್ರಶೇಖರ ಗಾನಗಿರಿ, ಸೌತಡ್ಕ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಪುರಂದರ ಕೆ ಕಡೀರ ಉಪಸ್ಥಿತರಿದ್ದರು.

Leave a Comment

error: Content is protected !!