ಬೆಳ್ತಂಗಡಿ: ನ್ಯಾಯವಾದಿಯಾಗಿ 25 ವರ್ಷ ಪೂರೈಸಿದ ಬಿ ಕೆ ಧನಂಜಯ ರಾವ್ ಅವರನ್ನು ಶಿಷ್ಯ ವೃಂದದ ವತಿಯಿಂದ ಅವರ ನೂತನ ಕಚೇರಿಯ ಶುಭಾರಂಭದ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ರಾಜಶ್ರೀ ಡಿ ರಾವ್, ಶಿಷ್ಯವರ್ಗದವರಾದ ಸಂತೋಷ್ ಕುಮಾರ್, ಮನೋಹರ ಕುಮಾರ್, ಇಳಂತಿಲ, ದಿನೇಶ್ ಶೆಟ್ಟಿ, ವಿನಯ ಕುಮಾರ್, ನವೀನ್ ಬಿ. ಕೆ, ಆನಂದ ಕುಮಾರ್, ರೇಷ್ಮಾ, ದಕ್ಷ ಜೈನ್, ಕೃತಿಕಾ ಜೆ ವೈಪಾನ, ಅಹಮ್ಮದ್ ಮುಜೀಬ್, ಮಿಹಿರ್ ರಾವ್ ಸಿಬ್ಬಂದಿಗಳಾದ ಸೌಮ್ಯ ಮತ್ತು ಶ್ವೇತ ಉಪಸ್ಥಿತರಿದ್ದರು.











