April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಡ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಗುರುಪೂಜೆ ಮತ್ತು ವಾರ್ಷಿಕ ಮಹಾಸಭೆ

ನಡ: ನಡ ಗ್ರಾಮದ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮಹಿಳಾ ಬಿಲ್ಲವ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ ಇದರ ಗುರುಪೂಜೆ ಮತ್ತು ವಾರ್ಷಿಕ ಮಹಾಸಭೆಯು ಮೇ 28ರಂದು ವೀರಪ್ಪ ಪೂಜಾರಿ ಕೊಟ್ಲಪ್ಪಾಡಿ ರವರ ಅಧ್ಯಕ್ಷತೆಯಲ್ಲಿ ಶ್ರೀ ನಾರಾಯಣ ಗುರು ಸಮುದಾಯ ಭವನ ನಡ ಮಂಜೊಟ್ಟಿಯಲ್ಲಿ ನಡೆಯಿತು.

ಬೆಳಗ್ಗೆ ಗಣಹೋಮ, ಭಜನೆ, ಗುರುಪೂಜೆ ಮತ್ತು ಸಭಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಿವೃತ್ತ ಮುಖ್ಯೋಪಾಧ್ಯಯರು ಜ್ಯೋತಿ ಕೃಷ್ಣಪ್ಪ ಪೂಜಾರಿ ಕುದುಪುಲ, ಮಾಜಿ ಸೈನಿಕರು ಶಿವಾಜಿ, ಡಾಕ್ಟರ್ ಹವ್ಯಶ್ರೀ ಮೋಹನ್ ರಾಜ್, ರಾಜ್ಯ ಪ್ರಶಸ್ತಿ ವಿಜೇತ ಜಯಾನಂದ ಅಂಕಾಜೆ, ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ , ದೇವೇಂದ್ರ ಪೂಜಾರಿ, ಕಾರ್ತಿಕ್, ಶ್ರೀಮತಿ ವಸಂತಿ, ವಸಂತ ಕುತ್ತೊಟ್ಟು, ಜಯಕುಮಾರ್ ಸುರ್ಯ, ಶ್ರೀ ಚಿದಾನಂದ ಪೂಜಾರಿ ಎಲ್ಲಡ್ಕ, ಅಭಿನಂದನ್ ಉಪಸ್ಥಿತರಿದ್ದರು.

ಅನನ್ಯ ಇವರ ಪ್ರಾರ್ಥನೆಯೊಂದಿಗೆ ಜಯಕುಮಾರ್ ಸುರ್ಯ ಸ್ವಾಗತಿಸಿದರು. ಗುರುನಾರಾಯಣ ಸ್ವಾಮಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಮೀನಾಕ್ಷಿ.ಕೆ ಬಂಡಾರಿಕೋಡಿ ವಂದಿಸಿದರು.

Related posts

ಹೊಕ್ಕಾಡಿಗೋಳಿ: ವೀರ ವಿಕ್ರಮ ಜೋಡುಕರೆ ಬಯಲು ಕಂಬಳದ “ಕರೆ” ಮುಹೂರ್ತ

Suddi Udaya

ಶಿರಾಡಿ ಘಾಟ್ ನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಕುಸಿದು ಬಿದ್ದ ಗುಡ್ಡ: ಚಾಲಕ ಪ್ರಾಣಾಪಾಯದಿಂದ ಪಾರು

Suddi Udaya

ಗೇರುಕಟ್ಟೆಯಲ್ಲಿ ವಿಶ್ವ ಅಗ್ನಿಹೋತ್ರ ದಿನದ ಆಚರಣೆ

Suddi Udaya

ನಡ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ 12 ಕ್ಷೇತ್ರಗಳಲ್ಲೂ ಜಯಭೇರಿ, 1 ಕ್ಷೇತ್ರಕ್ಕೆ ಅವಿರೋಧ ಆಯ್ಕೆ

Suddi Udaya

ಚಾರ್ಮಾಡಿಯಲ್ಲಿ ವಿಳಂಬವಾಗುತ್ತಿರುವ ಮತದಾನ, ಕಾದು ಕಾದು ಸುಸ್ತಾದ ಮತದಾರರು.

Suddi Udaya

ಬಂಟ್ವಾಳ ವಲಯದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕಚೇರಿ ಮಚ್ಚಿನದಲ್ಲಿ ಉದ್ಘಾಟನೆ

Suddi Udaya
error: Content is protected !!