ಮರದಿಂದ ಬಿದ್ದು ಸಾವು

Suddi Udaya

ಉಜಿರೆ:ಹಲಸಿನ ಹಣ್ಣು ಕೀಳಲು ಮರ ಹತ್ತಿದ ವ್ಯಕ್ತಿ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಉಜಿರೆ ಗ್ರಾಮದ ಕಾಶಿಬೆಟ್ಟು ಸಮೀಪದ ಅರಳಿ ಎಂಬಲ್ಲಿ ಮೇ 28 ನಡೆದಿದೆ.

ಅರಳಿ ನಿವಾಸಿ ರಾಜೇಶ್ (45) ಎಂಬವರು ಹಲಸಿನ ಹಣ್ಣು ತೆಗೆಯಲೆಂದು ಮರ ಹತ್ತಿದ್ದು ಈ ಸಂದರ್ಭದಲ್ಲಿ ಮರಕ್ಕೆ ಇಟ್ಟಿದ್ದ ಏಣಿಯೊಂದಿಗೆ ಜಾರಿ ಬಿದ್ದು ಗಂಭೀರ ಗಾಯಗೊಂಡು, ಆಸ್ಪತ್ರೆಗೆ ಕೊಂಡುಹೋಗುವಷ್ಟರಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಮೃತರಿಗೆ ಪತ್ನಿ,ಪುತ್ರ ಹಾಗೂ ಪುತ್ರಿ ಇದ್ದಾರೆ.

Leave a Comment

error: Content is protected !!