ಜೆಸಿಐ ಬೆಳ್ತಂಗಡಿ ಮಂಜುಶ್ರೀ ಯಲ್ಲಿ ವರ್ಷ ಕಾಮತ್ ರಿಂದ ಟೆಮ್ ದಿ ಟೈಮ್ ತರಬೇತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿಯ ಸದಸ್ಯರಿಗೆ ಟೆಮ್ ದಿ ಟೈಮ್ ತರಬೇತಿ ಕಾರ್ಯಗಾರ ಮೇ 29ರಂದು ಹಮ್ಮಿಕೊಳ್ಳಲಾಗಿದೆ.

ತರಬೇತಿಯನ್ನು ಜೆಸಿಐ ಭಾರತದ ಪ್ರೊವಿಷನಲ್ ನ್ಯಾಷನಲ್ ಟ್ರೈನರ್ ವರ್ಷ ಕಾಮತ್ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಯ ಅಧ್ಯಕ್ಷ ಶಂಕರ್ ರಾವ್ ವಹಿಸಿದ್ದರು.

ಘಟಕದ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಬಿ. ಎಸ್, ವಲಯದ ಮಧ್ಯಂತರ ಸಮ್ಮೇಳನದ ಘಟಕ ಸಂಯೋಜಕರಾದ ಶೈಲೇಶ್ ಉಪಸ್ಥಿತರಿದ್ದರು.

ಸದಸ್ಯ ಅನುದೀಪ್ ಜೈನ್ ವೇದಿಕೆ ಆಹ್ವಾನ ಮಾಡಿದರು, ವಿನಾಯಕ ಪ್ರಸಾದ್ ಜೆಸಿ ವಾಣಿ ಉದ್ಘೋಷಿಸಿದರು ಉಪಾಧ್ಯಕ್ಷರಾದ ಹೇಮಾವತಿ ಕೆ ತರಬೇತುದಾರರನ್ನು ಪರಿಚಯಿಸಿದರು. ಜೂನಿಯರ್ ಜೆಸಿ ಅಧ್ಯಕ್ಷ ರಾಮಕೃಷ್ಣ ಶರ್ಮಾ ಧನ್ಯವಾದವಿತ್ತರು. ಘಟಕದ ಪೂರ್ವಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

Leave a Comment

error: Content is protected !!