ಅಳದಂಗಡಿ: ದಿ| ಸುಶೀಲ ಪೂಜಾರ್ತಿರವರ ಪ್ರಥಮ ವರ್ಷದ ಪುಣ್ಯಸ್ಮರಣೆ: ಸುರೇಶ್ ಪೂಜಾರಿ ಅಭಿಮಾನಿ ಬಳಗದಿಂದ ಮನ ಮೆಚ್ಚುವ ಕಾರ್ಯ, ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಅಳದಂಗಡಿ: ಕರಂಬಾರು ಗ್ರಾಮದ ಊರ ನಿವಾಸಿ ಶ್ರೀಮತಿ ಸುಶೀಲರವರ ಸ್ಮರಣಾರ್ಥ ಅವರ ಮಕ್ಕಳು ಹಾಗೂ ಸುರೇಶ್ ಪೂಜಾರಿ ಅಭಿಮಾನಿ ಬಳಗದಿಂದ ಅಶಕ್ತ ಕುಟುಂಬಗಳಿಗೆ ಆಹಾರ ಸಾಮ್ರಾಗಿ ವಿತರಣಾ ಕಾರ್ಯಕ್ರಮ‌ ನಡೆಯಿತು.

ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಹಲವಾರು ಅಶಕ್ತ ಕುಟುಂಬಗಳಿಗೆ ದಿನಬಳಕೆಯ ಆಹಾರ ಸಾಮಾಗ್ರಿ ವಿತರಣೆ, ಆರೋಗ್ಯ ನಿಧಿ ವಿತರಣೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊನ್ನಯ್ಯ ಕುಲಾಲ್ ನಡೆಸುತ್ತಿರುವ ಶ್ರೀ ಗುರು ಚೈತನ್ಯ ವೃದ್ದಾಶ್ರಮಕ್ಕೆ ಭೇಟಿ ನೀಡಿ ಹಣ್ಣು ಹಂಪಲು ವಿತರಿಸಿ ದೇಣಿಗೆ ನೀಡಿ ಎಲ್ಲರ ಮೆಚ್ಚುಗೆ ಪಡೆದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಮುಂಬಯಿ ಉದ್ಯಮಿ ಸುರೇಶ್ ಪೂಜಾರಿ, ಊರ ಮತ್ತು ಸಹೋದರರು,ಕಿರಣ್ ಕುಮಾರ್ ಮಂಜಿಲ, ರತ್ನಾಕರ ಬುಣ್ಣನ್ ,ರಾಜೇಶ್ ಮೂಡುಕೋಡಿ, ಹರೀಶ್ ಕಲ್ಲಾಜೆ, ವಿಶ್ವನಾಥ ಬಂಗೇರ, ಸುರೇಂದ್ರ ಕುಮಾರ್ ಮುಂಬಯಿ, ದೇವದಾಸ್ ಆಲಡ್ಕ, ಗುರುವಪ್ಪ ಪೂಜಾರಿ, ಹರೀಶ್ ಕುಲಾಲ್, ಶುಭಕರ ಪೂಜಾರಿ, ಕಮಲಾಕ್ಷ ಉಂಗಿಲಬೈಲು ಹಾಗೂ ಕುಟುಂಬಸ್ಥರು, ಸುರೇಶ್ ಪೂಜಾರಿ ಅಭಿಮಾನಿ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು

ಆಗಮಿಸಿದ ಗಣ್ಯ ಅತಿಥಿಗಳನ್ನು ಸದಾನಂದ ಪೂಜಾರಿ ಉಂಗಿಲಬೈಲು ಸ್ವಾಗತಿಸಿದರು.

Leave a Comment

error: Content is protected !!