ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮದುವೆ ಆಮಂತ್ರಣ ಕಳುಹಿಸಿದ ವರ: ವೈವಾಹಿಕ ಬದುಕಿಗೆ ಕಾಲಿಟ್ಟ ಸುಬ್ರಹ್ಮಣ್ಯ ಆಚಾರ್ಯ – ಸವಿತಾ ದಂಪತಿಗೆ ಪ್ರಧಾನಿ ಕಾರ್ಯಲಯದಿಂದ ತಲುಪಿತು ಶುಭಾಶಯ ಪತ್ರ

Suddi Udaya

ಅಳದಂಗಡಿ: ಮೇ17-2023 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಪಿ.ಎಫ್ ಮಾರ್ಗದರ್ಶನ ಕೇಂದ್ರದ ಸಲಹೆಗಾರ ಅರ್ವ ಎಂಟರ್ಪ್ರೈಸಸ್ ನ ಅಳದಂಗಡಿಯ ಸುಬ್ರಹ್ಮಣ್ಯ ಆಚಾರ್ಯ- ಸವಿತ ದಂಪತಿಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಶುಭವನ್ನು ಹಾರೈಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಸುಬ್ರಹ್ಮಣ್ಯ ಆಚಾರ್ಯ ರವರು ಮದುವೆ ಆಮಂತ್ರಣ ನೀಡಿದ್ದು ಪ್ರಧಾನಿಯವರ ಸಹಿಯಿರುವ ಶುಭಹಾರೈಕೆಯ ಪತ್ರ ಅಂಚೆಯ ಮೂಲಕ ಸುಬ್ರಹ್ಮಣ್ಯ ಆಚಾರ್ಯ ಅವರಿಗೆ ತಲುಪಿದೆ.

ಪ್ರಧಾನಿ ನರೇಂದ್ರ ಮೋದಿಯವರ ಹಾರೈಕೆ ಯಾವಾಗಲೂ ನಮ್ಮ ಮೇಲಿರಲಿ ಎಂದು ಸುಬ್ರಹ್ಮಣ್ಯ ಆಚಾರ್ಯ ಮತ್ತು ಸವಿತಾ ದಂಪತಿ ಅತ್ಯಂತ ಸಂತೋಷದಿಂದ ಸಂಭ್ರಮಿಸಿ, ಪ್ರಧಾನಿಗೆ ಕೃತಜ್ಞತೆ ಅರ್ಪಿಸಿದರು.

Leave a Comment

error: Content is protected !!