ಅಳದಂಗಡಿ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಹಾಗೂ ಬೀಜ ಬಿತ್ತನೆ ಕಾರ್ಯಕ್ರಮ

Suddi Udaya

ಅಳದಂಗಡಿ :ವಿಶ್ವ ಪರಿಸರ ದಿನಾಚರಣೆ ಹಾಗೂ ಬೀಜ ಬಿತ್ತನೆಯ ಕಾರ್ಯಕ್ರಮದ ಅಂಗವಾಗಿ ಉಪ ವಲಯ ಅರಣ್ಯ ಇಲಾಖೆ ಅಳದಂಗಡಿಯ ವತಿಯಿಂದ ಬಡಗಕಾರಂದೂರು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸೌಮ್ಯ ಹರಿಪ್ರಸಾದ್, ಅರಣ್ಯಧಿಕಾರಿ ಸುರೇಶ ಗೌಡ, ಮಂಜುನಾಥ್ ಸವಳಿ, ಪೂವಪ್ಪ, ವೆಂಕಪ್ಪ, ಬಡಗಕಾರಂದೂರು ಶಾಲಾ ಎಸ್ ಡಿ ಯಂ ಸಿ ಯ ಉಪಾಧ್ಯಕ್ಷರಾದ ಆನಂದ್ ನೀರಲ್ಕೆ, ಸದಸ್ಯರಾದ ಶಶಿಕಾಂತ್ ನಾಯಕ್, ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜಸೇವಾ ಸಂಘಟನೆಯ ಅಧ್ಯಕ್ಷರಾದ ದೇವದಾಸ್ ಸಾಲ್ಯಾನ್, ವಿಪತ್ತು ನಿರ್ವಹಣಾ ಘಟಕದ ಯಶೋಧರ್ ಬಿಕ್ಕಿರ, ಬಡಗಕಾರಂದೂರು ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕರು ಉಪಸ್ಥಿತರಿದ್ದರು.

Leave a Comment

error: Content is protected !!