30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಧ.ಮಂ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಉಜಿರೆ : ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ ಉಜಿರೆ ಇಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂ. 5 ರಂದು ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಜಿರೆಯ ರತ್ನಮಾನಸ ವಿದ್ಯಾರ್ಥಿ ನಿಲಯ ಇಲ್ಲಿನ ಪಾಲಕರಾದ ಯತೀಶ್ ಕೆ ಬಳ೦ಜ ಅವರು ಮಾತನಾಡಿ ಸಾವಯವ ಕೃಷಿಯ ಮಹತ್ವ ದ ಬಗ್ಗೆ ಅರಿವು ಮೂಡಿಸಿದರು , ಅಮೃತ ಜಲ ಮತ್ತು, ಎರೆಹುಳ ಗೊಬ್ಬರ ತಯಾರಿಕೆ ಬಗ್ಗೆ ಮಾಹಿತಿ ನೀಡಿದರು ಹಾಗೂ ನೈತಿಕ ಶಿಕ್ಷಣ ಮತ್ತು ಜೀವನ ಶಿಕ್ಷಣದ ಮಹತ್ವದ ಕುರಿತು ಮನವರಿಕೆ ಮಾಡಿದರು.

ಶಾಲಾ ಮುಖ್ಯ ಶಿಕ್ಷಕರು ಬಾಲಕೃಷ್ಣ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಕರಕುಶಲದಿಂದ ರಚಿತವಾದ ಪರಿಸರ ಸಂರಕ್ಷಣಾ ವಿಷಯದ ಕುರಿತ ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸುವುದರ ಮೂಲಕ ಉದ್ಘಾಟನೆಗೊಂಡಿತು. ನಂತರ ಮಾತನಾಡಿ ಪರಿಸರ ಮನುಷ್ಯನಿಗೆ ಜೀವ ರಕ್ಷಕ ಕವಚದಂತೆ ಕೆಲಸ ಮಾಡುತ್ತದೆ. ತುಳಸಿಯಂತಹ ಗಿಡಗಳು ಮನುಷ್ಯನಿಗೆ ಪ್ರಾಣ ವಾಯುವನ್ನು ಒದಗಿಸುತ್ತದೆ ಹೀಗಾಗಿ ಪರಿಸರ ರಕ್ಷಣೆ ಅತ್ಯಗತ್ಯ ಎಂದರು.

ವಿದ್ಯಾರ್ಥಿನಿಯರು ಪ್ರಾರ್ಥನೆಗೆ ಗೈದರು. ಶಾಲಾ ಸಹ ಶಿಕ್ಷಕ ಕೂಸಪ್ಪಗೌಡ ಅವರು ಪರಿಸರ ದಿನಾಚರಣೆಯ ಹಿನ್ನೆಲೆ, ಅಗತ್ಯತೆ, ಆರಂಭ, ಇತ್ಯಾದಿಗಳನ್ನು ತಿಳಿಸುವುದರ ಜೊತೆಗೆ ಮಕ್ಕಳಿಗೆ ಪರಿಸರವನ್ನು ಸಂರಕ್ಷಿಸುವ ಅನಿವಾರ್ಯತೆಯ ಕುರಿತು ಮನದಟ್ಟು ಮಾಡಿದರು.

ನಂತರ ಮಕ್ಕಳಿಗೆ ಸಹ ಶಿಕ್ಷಕಿ ಅನಷಾ ಇವರು ಪರಿಸರದ ಕುರಿತ ರಸಪ್ರಶ್ನ ಕಾರ್ಯಕ್ರಮ ನೆರವೇರಿಸಿದರು. ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಹ ಶಿಕ್ಷಕಿ ಕಾವ್ಯ ಕಾರ್ಯಕ್ರಮದ ನಿರೂಪಣೆಗೈದರು. ಸಹ ಶಿಕ್ಷಕಿ ಅಶ್ವಿನಿ ಸ್ವಾಗತಿಸಿದರು. ಸಹ ಶಿಕ್ಷಕ ವಿರಾಜ್ ಧನ್ಯವಾದವಿತ್ತರು .

Related posts

ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಮೇಲಂತಬೆಟ್ಟು ಕಾರ್ಯಕ್ಷೇತ್ರದ ವಾತ್ಸಲ್ಯ ಸದಸ್ಯೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲಾ ಪುಸ್ತಕ, ಬ್ಯಾಗ್ ವಿತರಣೆ

Suddi Udaya

ತಣ್ಣೀರುಪಂತ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷರಾಗಿ ಸಹಕಾರಿ ಭಾರತೀಯ ಜಗದೀಶ್ ಶೆಟ್ಟಿ ಮೈರ ಆಯ್ಕೆ: ಕಾಂಗ್ರೆಸ್ ಬೆಂಬಲಿತ ಜಯವಿಕ್ರಮ್ ಗೆ ಸೋಲು

Suddi Udaya

ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ಸಾಧಕರಿಗೆ ಸನ್ಮಾನ

Suddi Udaya

ಉಜಿರೆ ಶ್ರೀ.ಧ.ಮಂ ಆಂಗ್ಲ ಮಾಧ್ಯಮ ಶಾಲೆಗೆ (ರಾಜ್ಯಪಠ್ಯಕ್ರಮ) ಶೇ. 100 ಫಲಿತಾಂಶ

Suddi Udaya

ವಿಶ್ವಕರ್ಮ ಸಮಾಜದ ಮಹಿಳಾ ರಾಜ್ಯಾಧ್ಯಕ್ಷೆ ವಸಂತ ಮುರುಳಿ ಆಚಾರ್ಯ ಧರ್ಮಸ್ಥಳಕ್ಕೆ ಭೇಟಿ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಶ್ರೀ ಶಾಸ್ತರ ಗುಡಿಯ ನೂತನ ಗರ್ಭಗುಡಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 3 ಲಕ್ಷ ಅನುದಾನ

Suddi Udaya
error: Content is protected !!