ಕರ್ನಾಟಕ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಆಗಿ ಸೂರಜ್ ಬಳಂಜ ಹೆಚ್. ಪೂಜಾರಿ ಆಯ್ಕೆ

Suddi Udaya

ಬಳಂಜ: 2021 ರ ಡಿಸೆಂಬರ್ ನಲ್ಲಿ ಕರ್ನಾಟಕ ಲೋಕಸೇವಾ ಆಯೋಗ ( ಕೆಪಿಎಸ್ಸಿ )ನಡೆಸಿದ ಪಿಡಬ್ಲ್ಯೂಡಿ ಇಲಾಖೆಯ ಕಿರಿಯ ಇಂಜಿನಿಯರ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೂರಜ್ ಬಳಂಜರವರು ಕರ್ನಾಟಕ ರಾಜ್ಯಕ್ಕೆ 20ನೇ ರ್‍ಯಾಂಕ್ ಪಡೆದು ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ರ್‍ಯಾಂಕ್ ಪಡೆದಿದ್ದಾರೆ.

ಪ್ರಸ್ತುತ ಕಾರವಾರ ಜಿಲ್ಲೆಯ ಭಟ್ಕಳ ತಾಲೂಕಿನ ಪಿಡಬ್ಲ್ಯೂಡಿ ಉಪವಿಭಾಗಕ್ಕೆ ಕಿರಿಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಲು ಸರ್ಕಾರ ಸ್ಥಳ ನಿಯೋಜಿಸಿದೆ.

ವಿದ್ಯಾರ್ಥಿ ಜೀವನದಿಂದಲೇ ಚುರುಕು ಸ್ವಭಾವವನ್ನು ಬೆಳೆಸಿಕೊಂಡು ಓದು, ಬರಹ, ಕ್ರೀಡೆ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು.

ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಬಳಂಜ ಬಿಲ್ಲವ ಸಂಘದ ಸದಸ್ಯರು ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

ಇವರು ಬಡಗಕಾರಂದೂರು ಗ್ರಾಮದ ಹಾನಿಂಜ ದಿ. ವಾಸು ಪೂಜಾರಿ ಮತ್ತು ಶ್ರೀಮತಿ ಸುಂದರಿ ಇವರ ಸುಪುತ್ರ.

Leave a Comment

error: Content is protected !!