ಮಂಗಳೂರು ಹಾಲು ಒಕ್ಕೂಟದ ನೌಕರರ ಟ್ರಸ್ಟಿನ ವತಿಯಿಂದ ಅಶೋಕ ಕುಮಾರ್ ಕುಟುಂಬಕ್ಕೆರೂ1.50 ಲಕ್ಷ ಚೆಕ್ ಹಸ್ತಾಂತರ

Suddi Udaya

ಬೆಳ್ತಂಗಡಿ: ಮುಂಡಾಜೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಅಶೋಕ ಕುಮಾರ್ ಅವರು ರಸ್ತೆ ಅಪಘಾತದಲ್ಲಿ ಮಾ. 7ರಂದು ನಿಧನರಾಗಿದ್ದು ಅವರ ಮನೆಯವರಿಗೆ ಮಂಗಳೂರು ಹಾಲು ಒಕ್ಕೂಟದ ನೌಕರರ ಟ್ರಸ್ಟಿನ ವತಿಯಿಂದ ರೂ 1.50 ಲಕ್ಷ ವನ್ನು ಮಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರು ಸುಚರಿತ ಶೆಟ್ಟಿಯವರು ಅಶೋಕ ಕುಮಾರ್ ಅವರ ತಂದೆಯವರಾದ ರಾಮಚಂದ್ರ ಹೆಗ್ಡೆ ಯವರಿಗೆ ಚೆಕ್ ಮೂಲಕ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಎಸ್ ಬಿ ಜಯರಾಮ ರೈ ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜೆ, ಸುಧಾಕರ ಶೆಟ್ಟಿಯವರು ವ್ಯವಸ್ಥಾಪಕ ನಿರ್ದೇಶಕರಾದ ಅಶೋಕ್ .ಮ್ಯಾನೇಜರ್ ನಿತ್ಯಾನಂದ ಭಕ್ತರವರು ಡಿ.ಎಂ ಸತೀಶ್ ರಾವ್ ಪಶುವೈದ್ಯಾಧಿಕಾರಿ ಡಾ॥ ಗಣಪತಿ ಹಾಲು ಉತ್ಪಾದಕರ ಸಂಘಗಳ ನೌಕರರ ಸಂಘದ ಅಧ್ಯಕ್ಷ ಬಿ ಮೊಹಮ್ಮದ್ ಷರೀಫ್,ನೌಕರರ ರಾಜ್ಯ ಪ್ರತಿನಿಧಿ ಶ್ರೀಮತಿ ಮೇಬಲ್ ಕ್ರಾಸ್ತ ಹಾಗೂ ಒಕ್ಕೂಟದ ನೌಕರರ ಟ್ರಸ್ಟ್ ನ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಮತ್ತು ಮುಂಡಾಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆಯವರು ಉಪಸ್ಥಿತರಿದ್ದರು

Leave a Comment

error: Content is protected !!