ಜೆಸಿಐ ವಲಯ ಮಧ್ಯಂತರ ಸಮ್ಮೇಳನ: ಭಾಷಣ ಸ್ಪರ್ಧೆಯಲ್ಲಿ ಕು. ಕನ್ನಿಕಾರಿಗೆ ದ್ವಿತೀಯ ಸ್ಥಾನ

Suddi Udaya

ಜೆಸಿಐ ಜೋಡುಮಾರ್ಗ ನೇತ್ರಾವತಿ ಇವರ ಆತಿಥ್ಯದಲ್ಲಿ ನಡೆದ ಜೆಸಿಐ ವಲಯ ಮಧ್ಯಂತರ ಸಮ್ಮೇಳನದ ಭಾಷಣ ಸ್ಪರ್ಧೆಯಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಜ್ಯೂನಿಯರ್ ಜೇಸಿ ಸದಸ್ಯೆ ಕುಮಾರಿ ಕನ್ನಿಕಾ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಜೆಸಿಐ ಆಂದೋಲನದಲ್ಲಿ ಯುವ ಜೇಸಿಗಳ ಪಾತ್ರ ಎಂಬ ವಿಷಯವಿದ್ದ ಈ ಸ್ಪರ್ಧೆಯಲ್ಲಿ ವಲಯದ ಹಲವಾರು ಸ್ಪರ್ಧಿಗಳು ಭಾಗವಹಿಸಿದ್ದರು. ಈಗಾಗಲೇ ಹಲವಾರು ಭಾಷಣ ಸ್ಪರ್ಧೆಯಲ್ಲಿ ವಿಜೇತರಾಗಿರುವ ಇವರು ಬಾರ್ಯ ಗ್ರಾಮದ ಸಾಂತ್ಯೆಳ್ಳಿ ಮನೆಯ ಸುಧಾಕರ ಬಂಗೇರ ಮತ್ತು ಅನಿತಾ ಎಸ್ ದಂಪತಿಗಳ ಪುತ್ರಿ.

Leave a Comment

error: Content is protected !!