ಗುತ್ತಿನಬೈಲು ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಸ. ಹಿ.ಪ್ರಾ. ಶಾಲೆ. ಗುತ್ತಿನ ಬೈಲು ಇಲ್ಲಿ ವಿದ್ಯಾಭಿಮಾನಿಗಳು ಮತ್ತು ದಾನಿಗಳಾದ ಮುರಳಿ. ಬಿ.ನೋಟರಿ ವಕೀಲರು ಬೆಳ್ತಂಗಡಿ ಇವರು ಒಂದರಿಂದ ಏಳನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ನೋಟ್ ಪುಸ್ತಕಗಳ ಪ್ರಾಯೋಜಕತ್ವ ವಹಿಸಿ ಮಕ್ಕಳಿಗೆ ಬರೆಯುವ ಪುಸ್ತಕ ವಿತರಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನುಎಸ್. ಡಿ. ಎಂ.ಸಿ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಭಟ್. ವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು,ದಾನಿಗಳಾದ ಶ್ರೀ ಮುರಳಿ. ಬಿ.ನೋಟರಿ ವಕೀಲರು, ಇವರ ಧರ್ಮಪತ್ನಿಯಾದ ಶ್ರೀಮತಿ ಮನೋರಮ, ಮಕ್ಕಳಾದ ಮಯೂರ ಹಾಗೂ ಮಂದಾರ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶ್ರೀ ದಿನೇಶ್. ಕೆ ಗೌರವ ಶಿಕ್ಷಕರು, ಪ್ರಾಸ್ತಾವಿಕ ಮಾತನ್ನು ಶ್ರೀಮತಿ ನಮಿತಾ ಆರ್ ಪ್ರಭಾರ ಮುಖ್ಯಶಿಕ್ಷಕಿ, ಧನ್ಯವಾದ ಗಳನ್ನು ಶ್ರೀಮತಿ ಶ್ಯಾಮಲಾ. ಕೆ ಸಹ ಶಿಕ್ಷಕಿ, ನಿರೂಪಣೆಯನ್ನು ಶ್ರೀ ವಸಂತಗುಡಿಗಾರ್ ಸಹ ಶಿಕ್ಷಕ ನೆರವೇರಿಸಿದರು.

Leave a Comment

error: Content is protected !!