July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ತೆಕ್ಕಾರು: ಬಾಜಾರು ಓಂ ರಾಮ್ ಫ್ರೆಂಡ್ಸ್ ಆಶ್ರಯದಲ್ಲಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ

ತೆಕ್ಕಾರು: ಓಂ ರಾಮ್ ಫ್ರೆಂಡ್ಸ್ ಬಾಜಾರು ಆಶ್ರಯದಲ್ಲಿ ಶ್ರೀ ರಾಮ ದುರ್ಗಾ ಪರಮೇಶ್ವರಿ ಭಜನಾ ಮಂದಿರ ಬಾಜಾರು ಇವರ ಸಹಕಾರದಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ಪ್ರಥಮ ವರ್ಷದ ಹೊನಲು ಬೆಳಕಿನ ಪುರುಷರ ಪ್ರೊ ಮಾದರಿಯ 60ಕೆಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮ ತೆಕ್ಕಾರು ಮರಮಗುತ್ತು ದಿವಂಗತ ಮರಮ ಲಿಂಗಪ್ಪ ಪೂಜಾರಿ ಸಭಾ ವೇದಿಕೆಯಲ್ಲಿ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಊರಿನ ಹಿರಿಯರಾದ ತುಕಾರಾಮ ನಾಯಕ್ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗ್ರಾಮದ ಹಾಗೂ ನೆರೆಯ ಗ್ರಾಮದವರನ್ನ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓಂ ರಾಮ್ ಫ್ರೆಂಡ್ಸ್ ನ ಅಧ್ಯಕ್ಷ ಪ್ರಕಾಶ್ ಕುಮಾರ್ ವಂದಾಯ ವಹಿಸಿದ್ದರು,
ಮುಖ್ಯ ಅಭ್ಯಾಗತರಾಗಿ ಅಜಿಲಮೊಗರು ಮಸೀದಿಯ ಅಲ್ ಹಾಜಿ ಅಬ್ದುಲ್ ಹಮೀದ್ ಮದನಿ ಮಾಜಿ ಖತೀಬರು‌. ರೆಹಾನತ್, ಗ್ರಾಮ ಪಂಚಾಯತ್ ಅಧ್ಯಕ್ಷರು ತೆಕ್ಕಾರು, ಜನಾರ್ಧನ ಪೂಜಾರಿ ಮರಮ, ಪ್ರಶಾಂತ್ ವಕೀಲರು ಬಾಜಾರ, ಮಂಜುನಾಥ್ ಸಾಲ್ಯಾನ್, ಅಬ್ದುಲ್ ರಝಾಕ್, ಲಕ್ಷ್ಮಣ್ ಬಟ್ರೆಬೈಲು, ರಾಘವೇಂದ್ರ ಅಡಪ,ಸಂಪತ್ ಕುಮಾರ್ ಶೆಟ್ಟಿ ಶುಭಹಾರೈಸಿದರು, ಸಂಜೀವ ಪೂಜಾರಿ ನೇಲ್ಯಪಲ್ಕೆ, ಪ್ರಶಾಂತ್ ಮೈರ ‌, ತಿಮ್ಮಪ್ಪ ಪೂಜಾರಿ ಬಾಜಾರು, ಪುರುಷೋತ್ತಮ ಮಜಲು, ಸಾಂತಪ್ಪ ಹಟದಡ್ಕ, ಕೃಷ್ಣ ಐತಾಳ್, ಯಜ್ಞೆಶ್ವರ್ ಮತ್ತಿತರರು ಉಪಸ್ಥಿತರಿದ್ದರು.

ಬೆಳಿಗ್ಗೆ ಭಜನೆ, ಮಹಿಳೆಯರಿಗೆ , ಪುರುಷರ, ಮಕ್ಕಳಿಗೆ ವಿವಿಧ ಕ್ರೀಡೆ ನಡೆಯಿತು.ದೇವಿ ಪ್ರಸಾದ್ ನಿರೂಪಿಸಿ, ತಿಲಕ್ ರಾಜ್ ವಂದಿಸಿದರು. ಮರುದಿನ ಬೆಳಿಗ್ಗೆ ತನಕ ಕಬಡಿ ಪಂದ್ಯಾಟ ರೋಚಕವಾಗಿ ಜರಗಿತು

Related posts

ಪ್ರತಿಭಾ ಕಾರಂಜಿ ಸ್ಪರ್ಧೆ: ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಹತ್ಯಡ್ಕ: ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರಕ್ಕೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ರಿಂದ ಅನುದಾನ ರೂ.5 ಲಕ್ಷ ಮಂಜೂರು

Suddi Udaya

ಜೂ. 6: ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಮತ್ತು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಆಶ್ರಯದಲ್ಲಿ ಕ್ರಾಂತಿವೀರ ಉಬಾರ್ ಮಂಜ ಬೈದ್ಯ ಪುಸ್ತಕ ಬಿಡುಗಡೆ

Suddi Udaya

ಉರುವಾಲು ಪದವು ಶ್ರೀ ಮಹಮ್ಮಾಯಿ ದೇವಿಯ ವಾರ್ಷಿಕ ಗೊಂದೋಳು ಪೂಜೆ

Suddi Udaya

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: 12 ಕ್ಷೇತ್ರಗಳಲ್ಲೂ ಬಿಜೆಪಿ ಬೆಂಬಲಿತರ ಜಯಭೇರಿ

Suddi Udaya

ಧರ್ಮಸ್ಥಳ: ಕೇಶವ ಗಾಣಿಗ ನಿಧನ

Suddi Udaya
error: Content is protected !!