ಕುತ್ಯಾರು ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ: ಬೆಳ್ತಂಗಡಿ ಪೊಲೀಸ್ ರಿಂದ ತನಿಖೆ

Suddi Udaya

ಬೆಳ್ತಂಗಡಿ: ಇಲ್ಲಿಯ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಜೂ.13 ರಂದು ರಾತ್ರಿ 11 ಗಂಟೆ ಸುಮಾರಿಗೆ ಕಳ್ಳತನಕ್ಕೆ ಯತ್ನಿಸಿದ್ದು ದೇವಸ್ಥಾನದ ಸಿಬ್ಬಂದಿ ಎಚ್ಚರಗೊಂಡು ಬೊಬ್ಬೆ ಹೊಡೆದಿದ್ದು ಕಳ್ಳರು ಪರಾರಿಯಾದ ಘಟನೆ ನಡೆದಿದೆ.

ದೇವಸ್ಥಾನದ ಸಮೀಪವಿರುವ ಗೋಡೌನ್‌ನಲ್ಲಿರುವ ಕಂಬಗಳನ್ನು ಉಪಯೋಗಿಸಿ ಏಣಿ ಮಾಡಿ ದೇವಸ್ಥಾನದ ಹಿಂಬದಿಯಿಂದ ಕಳ್ಳತನಕ್ಕೆ ಯತ್ನ ನಡೆದಿದ್ದು ಶಬ್ದಕ್ಕೆ ಎಚ್ಚರಗೊಂಡ ಸಿಬ್ಬಂದಿ ತಕ್ಷಣ ಬೊಬ್ಬೆ ಹೊಡೆದಿದ್ದು ಕಳ್ಳರು ಪರಾರಿಯಾಗಿದ್ದಾರೆ.

ಅದೇ ದಿನ ಕುತ್ಯಾರು ದೇವಸ್ಥಾನದ ಸಮೀಪದ ಹಾಡುಹಗಲೇ ಮನೆಯಲ್ಲಿ ಕಳ್ಳತನ ನಡೆದಿದ್ದು ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. ಒಂದೇ ದಿನ ಎರಡು ಕಡೆಗಳಲ್ಲಿ ಕಳ್ಳತನ ನಡೆದಿದ್ದು, ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದು ಇನ್ನಷ್ಟೇ ಮಾಹಿತಿಗಳು ತಿಳಿಯಲಿದೆ..

Leave a Comment

error: Content is protected !!