ಬೆಳ್ತಂಗಡಿ: ಪಾರಸ್ ಪೃಥ್ವಿ ಜುವೆಲ್ಸ್ ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ” ಪೃಥ್ವಿ ಮಹಾಪರ್ವ” ಕಾರ್ಯಕ್ರಮಕ್ಕೆ ಅ.10 ರಂದು ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಅರ್ಚಕ ನಾಗರಾಜ್ ಕಾರಂತ್, ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆಯ ಸದಸ್ಯೆ ಆಶಾ ರಘುನಾಥ್ ಶಾಂತಿ, ಶಾಖಾ ಪ್ರಬಂಧಕ ಅಶೋಕ್ ಬಂಗೇರ, ಉಪ ಶಾಖಾ ಪ್ರಬಂಧಕ ಯದುಕೃಷ್ಣ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪೃಥ್ವಿ ಮಹಾಪರ್ವವು ಜೋಡಿ ಹಬ್ಬಗಳ ಜೋಡಿ ಕೊಡುಗೆಯಾಗಿದ್ದು ಅ.10 ರಿಂದ ನವೆಂಬರ್ 15 ರವರೆಗೆ ನಡೆಯಲಿದೆ. ಪ್ರತಿ ಗ್ರಾಂ. ಚಿನ್ನಾಭರಣಗಳ ಮೇಲೆ ರೂ.251 ರಿಯಾಯಿತಿ, ವಜ್ರಗಳ ಮೌಲ್ಯದ ಮೇಲೆ ಶೇ. 25 ರಷ್ಟು ರಿಯಾಯಿತಿ, ಪ್ರತಿ ಕೆ.ಜಿ ಬೆಳ್ಳಿ ಹಾಗೂ ಬೆಳ್ಳಿ ಪದಾರ್ಥಗಳ ಮೇಲೆ ರೂ. 5000 ರಿಯಾಯಿತಿ ದೊರೆಯಲಿದೆ.
ಲಕ್ಕಿ ಡ್ರಾ ಮೂಲಕ ಪ್ರತಿ ದಿನ ಒಂದು ಖಚಿತ ಬಂಪರ್ ಉಡುಗೊರೆಯನ್ನು ಪಡೆದುಕೊಳ್ಳಬಹುದು ಹಾಗೂ ರೂ. 5000 ಪಾವತಿಸಿ ಚಿನ್ನದ ದರದ ಸಂರಕ್ಷಣೆ ಪಡೆಯಬಹುದು.













