ಸವಣಾಲು ಅ.ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಸವಣಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳಾದ ಮುರಳಿ ನೋಟರಿ ವಕೀಲರು ಇವರ ಕುಟುಂಬದವರಿಂದ ನೋಟ್ ಪುಸ್ತಕಗಳ ವಿತರಣೆಯು ಜೂ 13 ರಂದು ಜರಗಿತು.

ಸಭಾಧ್ಯಕ್ಷತೆಯನ್ನು ಶಾಲಾಡಳಿತ ಟ್ರಸ್ಟಿನ ಅಧ್ಯಕ್ಷ ಕೃಷ್ಣಪ್ಪ ಗೌಡ ವಹಿಸಿದ್ದರು.

ದಾನಿಗಳಾದ ಶ್ರೀ ಮುರಳಿ ನೋಟರಿ ವಕೀಲರು, ಇವರ ಧರ್ಮಪತ್ನಿ ಶ್ರೀಮತಿ ಮನೋರಮಾ, ಸುಪುತ್ರರಾದ ಮಂದಾರ, ಮಯೂರ ,ಟ್ರಸ್ಟಿನ ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್, ಸಂಚಾಲಕರಾದ ಕಿರಣ್ ಕುಮಾರ್ ವಕೀಲರು, ,ಕೋಶಾಧಿಕಾರಿಗಳಾದ ಸುಲೈಮಾನ್ , ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗಣೇಶ್ ಭಂಡಾರಿ, ತಾಯಂದಿರ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಪ್ರೇಮ ,ಶಾಲಾ ಮುಖ್ಯೋಪಾಧ್ಯಾಯರಾದ ಜಿ ಮಂಜುನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment

error: Content is protected !!