ಜೂ.19: ದರ್ಭೆತಡ್ಕ ಸುದೆಗಂಡಿಯಲ್ಲಿ ಕಿರು ಸೇತುವೆಯ ದುರಸ್ತಿ ಕಾರ್ಯ ನಡೆಸಲು ಗ್ರಾಮಸ್ಥರ ಸಭೆ

Suddi Udaya

ಅರಸಿನಮಕ್ಕಿ : ಹತ್ಯಡ್ಕ ಗ್ರಾ.ಪಂ. ವ್ಯಾಪ್ತಿಯ ಕಪಿಲ ನದಿಗೆ ದರ್ಭೆತಡ್ಕ ಸುದೆಗಂಡಿ ಎಂಬಲ್ಲಿ ಕಿರು ಸೇತುವೆಯ ದುರಸ್ತಿ ಕಾರ್ಯ ನಡೆಸಲು ಜೂ.19 ರಂದು ದರ್ಭೆತಡ್ಕ ದೇವಸ್ಥಾನದ ಸಭಾಂಗಣದಲ್ಲಿ ಗ್ರಾಮಸ್ಥರ ಸಭೆ ಕರೆಯಲಾಗಿದೆ.

ಸಭೆಯಲ್ಲಿ ಗ್ರಾ,ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತಿ ಇರುವಂತೆ ಎನ್ ಕರುಣಾಕರ ಗೋಗಟೆ ಹೊಸಮಠ ತಿಳಿಸಿದ್ದಾರೆ.

Leave a Comment

error: Content is protected !!