April 2, 2025
Uncategorizedಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿ ವತಿಯಿಂದ ಆರೋಗ್ಯ ನಿಧಿ ವಿತರಣೆ

ಶಿರ್ಲಾಲು : ಯುವವಾಹಿನಿ ಸಂಚಲನ ಸಮಿತಿ ಶಿರ್ಲಾಲು ಆರೋಗ್ಯ ನಿಧಿ, ವಿದ್ಯಾ ನಿಧಿ ಸಾಮಾಜಿಕವಾಗಿ ಹತ್ತು ಹಲವಾರು ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ಸಂಚಲನ ಸಮಿತಿಯಿಂದ ಜೂ.19 ರಂದು ಕರಂಬಾರು ಗ್ರಾಮದ ನಿವಾಸಿ ಲಲಿತಾ ಪೂಜಾರಿ ಇವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಹೆಚ್ಚಿನ ಚಿಕಿತ್ಸೆಗಾಗಿ ಯುವವಾಹಿನಿ ಸಂಚಲನ ಸಮಿತಿಯ ಮಾಸಿಕ ಸಭೆಯಲ್ಲಿ ಸಹಾಯದ ಬೇಡಿಕೆ ಮನವಿ ಬಂದಿದ್ದು ತಕ್ಷಣ ಸ್ಪಂದಿಸಿದ ಯುವವಾಹಿನಿ ಸಂಚಲನ ಸಮಿತಿ ಶಿರ್ಲಾಲು ಇದರ ಪದಾಧಿಕಾರಿಗಳು ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಧನಸಹಾಯ ನೀಡಿದರು.

ಈ ಸಂದರ್ಭದಲ್ಲಿ ಸಂಚಲನ ಸಮಿತಿಯ ಅಧ್ಯಕ್ಷ ಜಯಕುಮಾರ್ ಪೋಯ್ಯದಂಡ, ಕಾರ್ಯದರ್ಶಿ ಯಾತೀಶ್ ಕರಂಬಾರು, ಕೋಶಾಧಿಕಾರಿ ಶಿವಾನಂದ ತಾಲೂಕು ಯುವವಾಹಿನಿ ಘಟಕದ ಉಪಾಧ್ಯಕ್ಷರಾದ ಸದಾಶಿವ ಊರ, ಘಟಕದ ಕೋಶಾಧಿಕಾರಿ ವಿಜಯಕುಮಾರ್ ಹೇಡ್ಯದಡ್ಡ, ಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘ ಶಿರ್ಲಾಲು ಇದರ ಅಧ್ಯಕ್ಷರಾದ ಪ್ರವೀಣ್ ಪಾಲನೆ, ಯುವಬಿಲ್ಲವ ವೇದಿಕೆ ಅಧ್ಯಕ್ಷರಾದ ಹರೀಶ್ ಕಲ್ಲಾಜೆ, ಯುವವಾಹಿನಿ ಸಂಚಲನಸಮಿತಿ ಮಾಜಿ ಅಧ್ಯಕ್ಷರಾದ ಜ್ಣಾನೇಶ್ ಕಟ್ಟ, ರಂಜಿತ್ ಅಜಿರೋಳಿ, ಪ್ರಕಾಶ ಕಟ್ರಬೈಲು, ಪಂಚಾಯತ್ ಸದಸ್ಯರಾದ ಸೋಮನಾಥ ಬಳ್ಳಿದಡ್ಡ ,ದಿನೇಶ್ ಕರ್ದೋಟ್ಟು,ಸನತ್, ಶಶಿಕಾಂತ್ ಹಾಗು ಸಂಚಲನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Related posts

ಕುದ್ಯಾಡಿ ಸ. ಕಿ. ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವರ ಸಂಭ್ರಮದ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಅಳದಂಗಡಿ: ಆಟೋ ರಿಕ್ಷಾ ಮತ್ತು ಬೈಕ್ ಅಪಘಾತ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳಾಲು ಪೆರಿಯಡ್ಕ ಶಾಲಾ ಅಭಿವೃದ್ದಿಗೆ ಸಕಲ ಸೌಲಭ್ಯಗಳನ್ನು ಒದಗಿಸಿದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಂಚಾಲಕ ಮೋಹನ್ ಕುಮಾರ್ ರವರಿಗೆ ಶಾಲೆಯ ವತಿಯಿಂದ ಅಭಿನಂದನೆ

Suddi Udaya

ನೆರಿಯ : ಗ್ರಾಮ ಪಂಚಾಯತಿನ ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಇಂದಬೆಟ್ಟು: ಮೇರಿ ವರ್ಗಿಸ್ ನಿಧನ

Suddi Udaya
error: Content is protected !!