ದರ್ಭೆತಡ್ಕ ಸುದೆಗಂಡಿಯಲ್ಲಿ ಕಿರು ಸೇತುವೆಯ ದುರಸ್ತಿ ಕಾರ್ಯದ ಬಗ್ಗೆ ಗ್ರಾಮಸ್ಥರ ಸಭೆ: ಸಮಿತಿ ರಚನೆ

Suddi Udaya

Updated on:

ಹತ್ಯಡ್ಕ : ಹತ್ಯಡ್ಕ ಗ್ರಾಮದ ದರ್ಭೆತಡ್ಕ ಸುದೆಗಂಡಿ ಕಪಿಲಾನದಿ ಕಿರು ಸೇತುವೆಯು ಶಿಥಿಲಾವಸ್ಥೆಯಲ್ಲಿರುವುದರಿಂದ ಅದರ ದುರಸ್ತಿ ಕೆಲಸ ನಡೆಸುವ ಬಗ್ಗೆ ದರ್ಭೆತಡ್ಕ ಶ್ರೀ ಪರಶುರಾಮ ದೇವಸ್ಥಾನದ ಸಭಾಂಗಣದಲ್ಲಿ ಗ್ರಾಮಸ್ಥರ ಸಭೆ ಜೂ.19 ರಂದು ನಡೆಯಿತು.
ಅರಸಿನಮಕ್ಕಿ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಸೌಮ್ಯಾ ತುಳುಪುಳೆ ಹಾಜರಿದ್ದರು.


ಈ ಸಂದರ್ಭದಲ್ಲಿ ಕಪಿಲಾನದಿ ಸೇತುವೆ ದುರಸ್ತಿ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಕರುಣಾಕರ ಗೋಗಟೆ ಹೊಸ್ಮಠ. ಕಾರ್‍ಯದರ್ಶಿಯಾಗಿ ಪ್ರಶಾಂತ್ ಹೆಬ್ಬಾರ್ ನೆಲ್ಲಿತಡ್ಕ ಆಯ್ಕೆಯಾದರು. ಶೀಘ್ರದಲ್ಲಿ ಪಂಚಾಯತ್ ಗ್ರಾಮಸ್ಥರ ಸಹಕಾರದೊಂದಿಗೆ ಸೇತುವೆ ದುರಸ್ತಿ ಕೆಲಸ ಮಾಡುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಜೋಸೆಫ್ ಪಿರೇರಾ, ವೆಂಕಟೇಶ ಮೆಹೆಂದಳೆ, ಕಾಶಿನಾಥ ಗೋಗಟೆ, ವಾಮನ ತಾಮ್ಹನ್‌ಕರ್, ಧರ್ಮರಾಜ ಗೌಡ, ನರಸಿಂಹ ಪಾಳಂದೆ, ಉದಯಕುಮಾರ್ ಅಭ್ಯಂಕರ್, ವರದಶಂಕರ ದಾಮ್ಲೆ, ರಾಜೇಶ್ ಬೊಳ್ಳೋಡಿ ಉಪಸ್ಥಿತರಿದ್ದರು.

Leave a Comment

error: Content is protected !!