25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಬೆಳ್ತಂಗಡಿ ಅಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

ಬೆಳ್ತಂಗಡಿ: ವೇಣೂರು ಗ್ರಾಮದ ಗುಂಡೂರಿನ ನಿವಾಸಿ ಅನುಷಾ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭ ವೇಣೂರು ಸರ್ಕಾರಿ ಆಸ್ಪತ್ರೆ ಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಸರಕಾರಿ ಲೇಡಿಗೋಸಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ 108 ಆಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಅನುಷಾರವರಿಗೆ ಮೂತ್ರ ಸೊಂಕಿನ ಸಮಸ್ಯೆ ಇದೆ ಎಂದು ಸಮುದಾಯ ಆರೋಗ್ಯ ಕೇಂದ್ರ ವೇಣೂರು ಇಲ್ಲಿಂದ ಮಂಗಳೂರು ಸರಕಾರಿ ಲೇಡಿಗೋಸಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗ್ಬೇಕು ಎಂದು ಎಮರ್ಜೆನ್ಸಿ ಕರೆ ಬಂದಿದ್ದ ಸಂದರ್ಭ ತಕ್ಷಣ ಕಾರ್ಯ ಪ್ರವೃತ್ತ ರಾದ ಬೆಳ್ತಂಗಡಿ 108 ಆಂಬುಲೆನ್ಸ್ ಸಿಬ್ಬಂದಿಗಳು ವೇಣೂರು ಆಸ್ಪತ್ರೆಯಿಂದ ರೋಗಿಯನ್ನು ಕರೆದುಕೊಂಡು ಹೋಗುವಷ್ಟರಲ್ಲಿ ರೋಗಿಯ ಚಲನ ವಲನ ಗಮನಿಸಿದ ತುರ್ತು ವೈದ್ಯಕೀಯ ತಜ್ಞ ಕೇಶವ. ಕೆ. ಅವರು ಆಂಬುಲೆನ್ಸ್ ಮಂಗಳೂರಿನ ಪಡೀಲ್ ತಲುಪುತಿದ್ದಂತೆ ಆಂಬುಲೆನ್ಸ್ ನಲ್ಲಿಯೇ ಬಹಳ ಕ್ಲಿಷ್ಟಕರವಾದ ಹೆರಿಗೆಯನ್ನು ಮಾಡಿ ಮಗುವನ್ನು ಮತ್ತು ತಾಯಿಯನ್ನು ಮಂಗಳೂರಿನ ಸರಕಾರಿ ಲೇಡಿಗೊಶನ್ ಆಸ್ಪತ್ರೆಗೆ ಬಹಳ ಸುರಕ್ಷಿತವಾಗಿ ದಾಖಲಿಸಿದರು.

ಕೇಶವ ಕೆ ಇವರು ಮಾಡಿದ ಸುರಕ್ಷಿತ 60ನೇ ಆಂಬುಲೆನ್ಸ್ ಹೆರಿಗೆಯಾಗಿರುತ್ತದೆ. ಬೆಳ್ತಂಗಡಿಗೆ ಹೊಸದಾಗಿ ಆಯ್ಕೆಗೊಂಡಿರುವ ಎಮರ್ಜೆನ್ಸಿ (ಪೈಲೆಟ್) ಚಾಲಕ ಮಂಜುನಾಥ್ ಎಚ್. ಕೆ. ಅವರು ಸಹಕರಿಸಿದರು.

Related posts

ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘಕ್ಕೆ ತೆಲಂಗಾಣ ಸರಕಾರದ ಸಚಿವ ಪೊನ್ನಂ ಪ್ರಭಾಕರ್ ಭೇಟಿ

Suddi Udaya

ನೆಟ್ ಬಾಲ್ ಕ್ರೀಡೆಯಲ್ಲಿ ಎಸ್.ಡಿ.ಯಂ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ

Suddi Udaya

ಮೂರನೆ ಭಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕಾರ: ಕುವೆಟ್ಟು ಬಿಜೆಪಿ ಕಾರ್ಯಕರ್ತರಿಂದ ಚಾ-ತಿಂಡಿ, ಸ್ವೀಟ್ ಹಂಚಿ, ಸುಡುಮದ್ದು ಪ್ರದರ್ಶನ ಮೂಲಕ ಸಂಭ್ರಮ

Suddi Udaya

ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಾಗ ಬನದಲ್ಲಿ ದೇವರಿಗೆ ನಾಗತಂಬಿಲ ಹಾಗೂ ವಿಶೇಷ ಪೂಜೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವ: ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಭೇಟಿ

Suddi Udaya

ಪಣಕಜೆ : ಮನೆಯಿಂದ ರಸ್ತೆಗೆ ಓಡಿ ಬಂದ 3 ವರ್ಷದ ಮಗು: ರಿಕ್ಷಾಕ್ಕೆ ತಾಗಿ ಗಂಭೀರಗಾಯಗೊಂಡು ಮೃತ್ಯು

Suddi Udaya
error: Content is protected !!