ಧರ್ಮಸ್ಥಳ ಶ್ರೀ ಮಂ. ಸ್ವಾ. ಅ. ಹಿ. ಪ್ರಾ. ಶಾಲಾ ಅಧ್ಯಾಪಕ ವೃಂದದವರಿಂದ ಡಾ. ಡಿ ಹೆಗ್ಗಡೆಯವರ ಭೇಟಿ: ಅಭಿನಂದನೆ

Suddi Udaya

ಧರ್ಮಸ್ಥಳ: ಇಲ್ಲಿನ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ ವೃಂದದವರು ಸಂಸ್ಥೆಯ ಅಧ್ಯಕ್ಷರಾದ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಇಂದು ಭೇಟಿ ಮಾಡಿ ಶಾಲೆಯ ಶೈಕ್ಷಣಿಕ ವಿಚಾರಗಳ ವಾರ್ಷಿಕ ಕ್ರಿಯಾ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಇತ್ತೀಚೆಗೆ ಫ್ರಾನ್ಸ್ ನಲ್ಲಿ ಹೆಗ್ಗಡೆ ಅವರು ಮೈಸೂರಿನಲ್ಲಿರುವ ತಮ್ಮ ಎಸ್.ಡಿ.ಎಂ. ಐ.ಎಂ.ಡಿ. (ಎಸ್.ಡಿ.ಎಂ. ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್) ಸಂಸ್ಥೆಯ ಪಿಜಿಡಿಎಂ ಪ್ರೋಗ್ರಾಂಗೆ ಪ್ರತಿಷ್ಠಿತ ಯೂರೋಪಿಯನ್ ಫೆಡರೇಶನ್ ಆಫ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ (EFMD) ನವೀಕೃತ ಮಾನ್ಯತೆ ಸ್ವೀಕರಿಸಿದ ಬಗ್ಗೆ ಶಿಕ್ಷಕರು ಅವರಿಗೆ ಅಭಿನಂದನೆ ಸಲ್ಲಿಸಿದರು.

Leave a Comment

error: Content is protected !!