ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಅವರ ಡ್ರಾಗನ್ ಕೃಷಿ ತೋಟಕ್ಕೆ ವಿಜ್ಞಾನಿ ತಂಡ ಭೇಟಿ

Suddi Udaya

ಉಜಿರೆ : ಉಜಿರೆಯಲ್ಲಿರುವ ನಿವೃತ್ತ ಯೋಧ, ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತ ಕಾಂಚೋಡು ಗೋಪಾಲಕೃಷ್ಣ ಇವರ ಡ್ರಾಗನ್ ಕೃಷಿ ತೋಟಕ್ಕೆ ಐ.ಐ.ಹೆಚ್ ಆರ್ (ಇನ್ಸ್ಟಿಟ್ಯೂಟ್ ಅಪ್ ಇಂಡಿಯನ್ ಹಾಟಿಕಲ್ಚರ್ ಎಂಡ್ ರಿಸರ್ಚ್ ಸೆಂಟರ್) ಬೆಂಗಳೂರು ಕೃಷಿ ವಿಜ್ಞಾನಿ ಡಾ| ಕರುಣಾಕರ ಅವರು ಭೇಟಿ ನೀಡಿ, ಡ್ರಾಗನ್ ಕೃಷಿಯ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅಲ್ಲದೆ ಇನ್ನು ಹೆಚ್ಚಿನ ನೂತನ ಆವಿಷ್ಕಾರ ಮಾಡಲು ತಮ್ಮ ಪೂರ್ಣ ಸಹಕಾರ ನೀಡುವ ಬಗ್ಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು, ಐ.ಐ.ಹೆಚ್.ಆರ್‌ನ ಡಾ.ಕರುಣಾಕರ್ ಅವರ ಸಹೋದ್ಯೋಗಿಗಳು ಉಪಸ್ಥಿತರಿದ್ದರು.

Leave a Comment

error: Content is protected !!