ನಾವೂರು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಿಂದ ಸುಲ್ಯೋಡಿ ಶಾಲೆಯಲ್ಲಿ ಶ್ರಮದಾನ

Suddi Udaya

ನಾವೂರು: ಇಲ್ಲಿಯ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಸುಲ್ಯೊಡಿ, ಭಜನಾ ತಂಡದ ವತಿಯಿಂದ ಸುಲ್ಯೊಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತೆ, ಹೂವಿನ ಗಿಡಗಳನ್ನು ನೆಡುವುದು ಹಾಗೂ ತರಕಾರಿ ಬೆಳೆಸಲು ಸಾಲುಗಳ ಕೆಲಸ ಮಾಡುವ ಮೂಲಕ ಶ್ರಮದಾನವು ಜೂ.25 ರಂದು ಮಾಡಲಾಯಿತು.

ಈ ಕಾರ್ಯದಲ್ಲಿ ಭಜನಾ ಮಂಡಳಿಯ ಗೌರವ ಅಧ್ಯಕ್ಷ ಬಾಲಕೃಷ್ಣ ಅರುವಾಲ್, ಅಧ್ಯಕ್ಷ ಶಶಿ ಗೌಡ ಕುಂಡಡ್ಕ ಹಾಗೂ 30 ಮಂದಿ ಸದಸ್ಯರು ಭಾಗವಹಿಸಿ, ಭಜನಾ ತಂಡದ ಸೇವಾಕಾರ್ಯವನ್ನು ಮಾಡಿದರು.

Leave a Comment

error: Content is protected !!