ಬಳಂಜ: ರಾಜ್ಯ ಮಡಿವಾಳರ ಸಂಘದ ವತಿಯಿಂದ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ

Suddi Udaya

Updated on:

ಬಳಂಜ : ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ಬೆಂಗಳೂರು ಇವರ ಸಹಾಯದೊಂದಿಗೆ ಬೆಳ್ತಂಗಡಿ ತಾಲೂಕು ಮಡಿವಾಳರ ಒಕ್ಕೂಟ ಹಾಗೂ ವೇಣೂರು ಮಡಿವಾಳ ಸಮಾಜ ಸೇವಾ ಸಂಘ ರಿಜಿಸ್ಟರ್ ಇದರ ಸಹಕಾರದೊಂದಿಗೆ 2023 ನೇ ಸಾಲಿನ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಉತ್ತೀರ್ಣರಾದ ಮಡಿವಾಳ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬಳಂಜ ಬದಿನಡೆ ಕ್ಷೇತ್ರದಲ್ಲಿ ಜೂ 25 ರಂದು ನಡೆಯಿತು .

ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾಗಿ ಅಶೋಕ್ ಪಾನರು, ಡಾ ಸಂಜೀವ ಮಡಿವಾಳ ಅಧ್ಯಕ್ಷರು ಕರ್ನಾಟಕ ರಾಜ್ಯ ಮಡಿವಾಳ ಸಂಘಟನೆಗಳ ಒಕ್ಕೂಟ ಬೆಂಗಳೂರು ಹಾಗೂ ಬಳಂಜ ಶ್ರೀ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನ ಬದಿನಡೆ ಧರ್ಮದರ್ಶಿ ಜಯಶಾಲಿಯನ್ ,ಗ್ರಾಮ ಪಂಚಾಯಿತಿ ಹಂಡಜೆ ಸದಸ್ಯರಾದ ರಂಜಿತ್ ಪಾರಿಜಾತ, ವಿಠಲ್ ಕೆ ಅಳದಂಗಡಿ, ಶ್ರೀಮತಿ ಜಾನಕಿ ಕುಂದಾರ್, ನಿವೃತ್ತ ಮುಖ್ಯೋಪಾಧ್ಯಾಯನಿ ಮೂಡುಕೋಡಿ ಸತೀಶ್ ವೇಣೂರು, ಪ್ರಧಾನ ಕಾರ್ಯದರ್ಶಿ ಮಡಿವಾಳ ಸಮಾಜ ಸೇವಾ ಸಂಘ ವೇಣೂರು ಗಣೇಶ್ ಸಾಲಿಯನ್ ಅಧ್ಯಕ್ಷರು ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ಬೆಳ್ತಂಗಡಿ ಉಪಸ್ಥಿತರಿದ್ದರು.

Leave a Comment

error: Content is protected !!