ಕೊಕ್ಕಡ: ಮಿಯಾವಕಿ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮ

Suddi Udaya

ಕೊಕ್ಕಡ : ಗ್ರಾಮಪಂಚಾಯತ್ ಕೊಕ್ಕಡ ಹಿಂದೂ ಶಿವರುದ್ರಭೂಮಿ ಅಭಿವೃದ್ಧಿ ಸಮಿತಿ ಕೊಕ್ಕಡ ಸಹಭಾಗಿತ್ವದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ವಿಪತ್ತು ನಿರ್ವಹಣಾ ಘಟಕ ಕೊಕ್ಕಡ ವಲಯ ಹಾಗೂ ಸರಕಾರಿ ಪ್ರೌಢಶಾಲೆ ಕೊಕ್ಕಡ ಇವರ ಸಹಕಾರದಲ್ಲಿ ದುರ್ಗಾಸಿಂಗ್‌ ಇವರ ಮಾರ್ಗದರ್ಶನದಲ್ಲಿ ಮಿಯಾವಕಿ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮವು ಕೊಕ್ಕಡ ಹಿಂದೂ ಶಿವರುದ್ರಭೂಮಿ ವಠಾರದಲ್ಲಿ ಜೂ.30 ರಂದು ನಡೆಯಿತು.

ಈ ಸಂದರ್ಭದಲ್ಲಿ ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ಯೋಗೀಶ್ ಆಲಂಬಿಲ, ಉಪಾಧ್ಯಕ್ಷೆ ಪವಿತ್ರಾ, ಸದಸ್ಯ ಜಗದೀಶ್ ಕೆಂಪಕೋಡಿ, ಹಿಂದೂ ಶಿವರುದ್ರಭೂಮಿ ಅಧ್ಯಕ್ಷ ಬಾಲಕೃಷ್ಣ ನೈಮಿಷ, ಕಾರ್ಯದರ್ಶಿ ವಿಠಲ ಕುರ್ಲೆ, ಉಪಾಧ್ಯಕ್ಷ ಸಚಿನ್ ಬಜ, ಗ್ರಾ.ಪಂ. ಪಿಡಿಒ ದೀಪಕ್ ರಾಜ್, ಕೊಕ್ಕಡ ಪ್ರೌಢ ಶಾಲಾ ಶಿಕ್ಷಕಿ ಬೀನಾ ಸಾಗರ್, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಗಿಡ ನಾಟಿ ಮಾಡಿದರು.

Leave a Comment

error: Content is protected !!